ಆರ್ಟಿಕಲ್ 370 ಚರ್ಚೆ: ಜಮ್ಮು-ಕಾಶ್ಮೀರಕ್ಕೆ ರಾಜ್ಯತ್ವ ನೀಡಲು ಇದು ಸರಿಯಾದ ಸಮಯವಲ್ಲ: ಬಿಜೆಪಿ
ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯತ್ವವನ್ನು ನೀಡುವಂತೆ ಒತ್ತಾಯಗಳು ಹೆಚ್ಚುತ್ತಿವೆ. ಈ ನಡುವೆ ರಾಜ್ಯತ್ವ ನೀಡಲು ಸದ್ಯಕ್ಕೆ ಪರಿಸ್ಥಿತಿ ಸೂಕ್ತವಾಗಿಲ್ಲ ಎಂದು ಬಿಜೆಪಿ ಹೇಳಿದೆ.
ಆಗಸ್ಟ್ 5, 2019 ರಂದು, ಕೇಂದ್ರವು ಜೆ & ಕೆ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತ್ತು. ಅಲ್ಲದೆ, ಅದನ್ನು ಎರಡು (ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್) ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು.
“ಪ್ರಸ್ತುತ ವ್ಯವಸ್ಥೆಯು ಜಮ್ಮು-ಕಾಶ್ಮೀರದಲ್ಲಿ ಆಮೂಲಾಗ್ರವಾಗಿ ಬದಲಾಗಿಲ್ಲ ಎಂದು ನಾವು ಭಾವಿಸುತ್ತೇವೆ. ಹೀಗಾಗಿ ಮತ್ತು ರಾಜ್ಯತ್ವವನ್ನು ತಕ್ಷಣವೇ ನೀಡುವುದರಿಂದ ಅಲ್ಲಿ ಏನಾಗುತ್ತದೆ ಎಂದು ನಾವು ಕಾಯಬೇಕಾಗುತ್ತದೆ. ಉಗ್ರಗಾಮಿಗಳ ಇತ್ತೀಚಿನ ಗುರಿ ಮತ್ತು ಚಟುವಟಿಕೆಗಳ ಜೆ&ಕೆಗೆ ರಾಜ್ಯತ್ವ ನೀಡುವ ವಿಷಯಗಳನ್ನು ತಡೆಹಿಡಿಯುತ್ತಿದೆ “ಎಂದು ಬಿಜೆಪಿಯ ಜೆ & ಕೆ ವಕ್ತಾರರು ತಿಳಿಸಿದ್ದಾರೆ.
ಚುನಾವಣೆಯನ್ನು ತಡೆಹಿಡಿಯಲು ಸಾಧ್ಯವಿಲ್ಲ. ರಾಜ್ಯವನ್ನು ಮರುಸ್ಥಾಪಿಸಿದ ನಂತರ ಚುನಾವಣೆ ನಡೆಸಬೇಕೆಂದು ಬೇಡಿಕೆ ಇಡುವವರು ಚುನಾವಣೆಯನ್ನು ವಿಳಂಬ ಮಾಡಲು ಬಯಸುತ್ತಾರೆ ಎಂದು ಹೇಳಿದರು.
ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಅಲ್ಲಿ ಚುನಾವಣೆ ನಡೆಸುವ ಮೊದಲು ಜೆ & ಕೆ ಗೆ ರಾಜ್ಯತ್ವವನ್ನು ಪುನಃಸ್ಥಾಪಿಸಲು ಒತ್ತಾಯಿಸುತ್ತಿವೆ.
ಇದನ್ನೂ ಓದಿ: ಪರಿಶಿಷ್ಟ ಜಾತಿಯವರನ್ನು ಸಿನಿಮಾ ಇಂಡಸ್ಟ್ರಿಯಿಂದ ಹೊರ ಹಾಕಬೇಕು ಎಂದ ನಟಿ; ಪ್ರಕರಣ ದಾಖಲು