ಮೊಬೈಲ್ ಇಂಟರ್ನೆಟ್ ಡೇಟಾ ಖಾಲಿ; ತಮ್ಮನನ್ನೇ ಇರಿದು ಕೊಂದ ಅಣ್ಣ!
ತನ್ನ ಮೊಬೈಲ್ನಲ್ಲಿ ಇಂಟರ್ನೆಟ್ ಡೇಟಾವನ್ನು ಖಾಲಿ ಮಾಡಿದ್ದಕ್ಕಾಗಿ 23 ವರ್ಷದ ಯುವಕ ಲ್ಲಿ ತನ್ನ ಕಿರಿಯ ಸಹೋದರನನ್ನು ಇರಿದು ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಜೋಧ್ಪುರ್ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮೆನೆಯ ಮೇಲ್ಚಾವಣಿಯಲ್ಲಿ ತೀವ್ರ ರಕ್ತಸ್ರಾವವಾಗಿ ಬಿದ್ದದ್ದ ಯುವಕನ್ನು ಕಂಡು ಕುಟುಂಬ ಸದಸ್ಯರು ಬುಧವಾರ ತಡರಾತ್ರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆತ ಆ ವೇಳಗೆ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.
ತನ್ನ ಕಿರಿಯ ಸಹೋದರನಿಗೆ ಇರಿದ ನಂತರ ಆರೋಪಿ ಪರಾರಿಯಾಗಿದ್ದು, ಶುಕ್ರವಾರ ರೈಲ್ವೆ ನಿಲ್ದಾಣದಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
“ಬುಧವಾರ ಸಂಜೆ, ರಾಮನ್ ತನ್ನ ಮೊಬೈಲ್ ಇಂಟರ್ನೆಟ್ ಖಾಲಿ ಮಾಡಿದ್ದಕ್ಕಾಗಿ ತನ್ನ ಕಿರಿಯ ಸಹೋದರ ರಾಯ್ನನ್ನು ಮನೆಯ ಮೇಲ್ಚಾವಣಿಗೆ ಕರೆದೊಯ್ದು ಗದರಿಸಿದನು. ಕೋಪಗೊಂಡಿದ್ದ ರಾಮನ್, ರಾಯ್ ಅವರ ಎದೆಗೆ ನಾಲ್ಕೈದು ಬಾರಿ ಇರಿದು ಓಡಿಹೋಗಿದ್ದನು” ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮಾನಸಿಕವಾಗಿ ಅಸ್ಥಿರನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ದಲಿತರಿಗೆ ಕ್ಷೌರ ಮಾಡಿದ್ದಕ್ಕೆ ಸಾಮಾಜಿಕ ಬಹಿಷ್ಕಾರ: ಅಮಾನವೀಯತೆಗೆ ಸಾಕ್ಷಿಯಾದ ನಂಜನಗೂಡು!