ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸ್ಫೋಟ ಪ್ರಕರಣ : ಇದು ರಾಷ್ಟ್ರೀಯ ಷಡ್ಯಂತ್ರ – ಮುತಾಲಿಕ್
ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಈ ಘಟನೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಲಘುವಾಗಿ ಪರಿಗಣಿಸಿವೆ.
ನಿಲ್ದಾಣದಲ್ಲಿ ಸಿಸಿ ಕ್ಯಾಮರಾ ಇದ್ರೂ ಸುಳಿವು ಸಿಕ್ಕಿಲ್ಲ ಅನ್ನೋದು ಹಾಸ್ಯಾಸ್ಪದ. ಇದು ರಾಷ್ಟ್ರೀಯ ಷಡ್ಯಂತ್ರ ಎಂದಿದ್ದಾರೆ.
ರಾಮ ಮಂದಿರದ ತೀರ್ಪು ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಈ ಸ್ಫೋಟ ಮಾಡಲಾಗಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಪಶ್ಚಿಮ ಬಂಗಾಳದಲ್ಲಿ ಹಿಂದೂಗಳನ್ನ ಕೊಲೆ ಮಾಡಲಾಗುತ್ತಿದೆ. ಘಟನೆಯ ಹಿಂದೆ ಪಾಕಿಸ್ಥಾನದ ಕೈವಾಡವಿದೆ. ಹಿಂದೂಗಳನ್ನ ಹಣಿಯಲು ವ್ಯವಸ್ಥಿತ ಸಂಚು ನಡೆಯುತ್ತಿದೆ. ಸುನ್ನಿ ಮುಸ್ಲಿಂ ಜಮಾತ್ ಸಂಘಟನೆ ಇಡೀ ಜಗತ್ತಿನಲ್ಲಿ ಭಯೋತ್ಪಾದನೆ ಪಸರಿಸುತ್ತಿದೆ.
ಹುಬ್ಬಳ್ಳಿಯಲ್ಲಿ ಬಂಧನವಾದ ಶಂಕಿತ ಉಗ್ರ ಸುನ್ನಿ ಸಮುದಾಯಕ್ಕೆ ಸೇರಿದವ. ಜಗನ್ನಾಥ ಶೆಟ್ಟಿ ಆಯೋಗದ ವರದಿಯನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಮದರಸಾಗಳನ್ನು ಬ್ಯಾನ್ ಮಾಡಬೇಕು. ಮದರಸಾಗಳಲ್ಲಿ ಎಷ್ಟು ಶಸ್ತ್ರಾಸ್ತ್ರಗಳಿವೆ, ಮಕ್ಕಳಿಗೆ ಏನು ಕಲಿಸ್ತಾರೆ ಅನ್ನೊ ಬಗ್ಗೆ ಅನುಮಾನವಿದೆ. ಹುಬ್ಬಳ್ಳಿ, ಬೆಳಗಾವಿ, ಮಡಕೇರಿ, ಮಂಗಳೂರು, ಬೆಂಗಳೂರಿನಲ್ಲಿ ಬಾಂಗ್ಲಾ ದೇಶದ ಅಕ್ರಮ ವಲಸಿಗರಿದ್ದಾರೆ. ಅವರನ್ನ ನೀವು ಹೊರ ಹಾಕ್ತಿರೊ ಅಥವಾ ನಾವೇ ಹೋರಹಾಕ್ಬೇಕೋ? ರೋಷನ್ ಬೇಗ್, ಅರವಿಂದ ಲಿಂಬಾವಳಿ, ಸಿ.ಟಿ. ರವಿ ಕ್ಷೇತ್ರದಲ್ಲಿ ಸಾವಿರಾರು ಬಾಂಗ್ಲಾ ದೇಶಿಯರಿದ್ದಾರೆ. ಸರ್ಕಾರದ ಬಳಿ ಇರದ ಮಾಹಿತಿ ಶ್ರೀರಾಮ ಸೇನೆ ಬಳಿ ಇವೆ. ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.