ಸುಪ್ರೀಂಕೋರ್ಟ್ ತೀರ್ಪುನ ಮೇಲೆ ಉಪ ಚುನಾವಣೆ ನಿಂತಿದೆ – ಸಿಟಿ ರವಿ
ಸುಪ್ರೀಂಕೋರ್ಟ್ ತೀರ್ಪುನ ಮೇಲೆ ಉಪ ಚುನಾವಣೆ ನಿಂತಿದೆ. ಉಪ ಚುನಾವಣೆಯ ಮೇಲೆ ಸುಪ್ರೀಂಕೋರ್ಟ್ ತೀರ್ಪು ಪರಿಣಾಮ ಬೀರಲಿದೆ ಎಂದು ಉಪಚುನಾಣೆ ನಡೆಯುವ ಬಗ್ಗೆ ಚಿಕ್ಕಮಗಳೂರಿನಲ್ಲಿ ಸಚಿವ ಸಿ.ಟಿ.ರವಿ ಅನುಮಾನ ಹೊರಹಾಕಿದ್ದಾರೆ.
ಚುನಾವಣಾ ಆಯೋಗ ಉಪ ಚುನಾವಣೆಯನ್ನು ಘೋಷಣೆ ಮಾಡಿದೆ. ಆದ್ರೆ, ಉಪ ಚುನಾವಣೆಗೆ ಕೆಲವೊಂದು ತಾಂತ್ರಿಕ ತೊಡಕುಗಳಿವೆ. ಹಿಂದಿನ ಸಭಾಧ್ಯಕ್ಷ ರಮೇಶ್ ಕುಮಾರ್ ಅವರ ತೀರ್ಪಿನ ಮೇಲೆ ಅನರ್ಹರು ಸುಪ್ರೀಂ ಕೋರ್ಟ್ ಗೆ ಹೋಗಿದ್ದಾರೆ.
ಅನರ್ಹ ಶಾಸಕರ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಇದೆ. ಈಗಿರುವಾಗ, ಸುಪ್ರೀಂ ನೀಡುವ ತೀರ್ಪುನ ಮೇಲೆ ಈ ಚುನಾವಣೆ ನಡೆಯತ್ತೋ ಇಲ್ಲವೋ, ನಡೆದರೆ ಯಾವಾಗ ಎನ್ನುವುದರ ಬಗ್ಗೆ ನಿರ್ಧಾರವಾಗಲಿದೆ. ಬಿಜೆಪಿ ಚುನಾವಣೆಗಳಿಗೆ ಸದಾ ಸಿದ್ದ. ಉಪ ಚುನಾವಣೆಗೆ ಮಾತ್ರವಲ್ಲ ಸಂಘಟನೆಯಿಂದಲೂ ಎಲ್ಲಾ ಹಂತದಲ್ಲಿ ತಯಾರಿ ನಡೆದಿರುತ್ತೆ ಎಂದು ಸಿ.ಟಿ ರವಿ ಉಪಚುನಾವಣೆ ನಡೆಯುವ ಬಗ್ಗೆ ಅನುಮಾನ ಸೂಚಿಸಿದ್ದಾರೆ.