ಯುಎಇ, ಓಮನ್ ಮತ್ತು ಬಹ್ರೇನ್ನಲ್ಲೂ ಧೂಳೆಬ್ಬಿಸಿದ ‘ಕುರುಕ್ಷೇತ್ರ’
ಚಾಲೆಂಜಿಂಗ್ ಸ್ಟಾರ್ ದರ್ಶನ್ಅವರು ಧುರ್ಯೋಧನ ಪಾತ್ರದಲ್ಲಿ ಕಾಣಿಸಿಕೊಂಡ ಚಿತ್ರ ಕುರುಕ್ಷೇತ್ರ. ನಿರೀಕ್ಷೆಗೂ ಮೀರಿ ಸಾಧನೆ ಮಾಡುತ್ತಿದೆ. ಇದರ ಬೆನ್ನಲ್ಲೇ ದರ್ಶನ್ ಅವರನ್ನ ತೆರೆಯ ಮೇಲೆ ನೋಡಲು ಯಾರೆಲ್ಲ ಕಾಯುತ್ತಿದ್ದಾರೋ ಅವರಿಗೆಲ್ಲ ಚಿತ್ರ ವೀಕ್ಷಿಸಿ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಚಿತ್ರ ಸದ್ಯ ದುಬೈನಲ್ಲಿ ತೆರೆ ಕಂಡಿದೆ.
ದುಬೈ ನಲ್ಲಿ ಮಾತ್ರವಲ್ಲದೇ ಯುಎಇ, ಓಮನ್, ಭರೈನ್, ನಲ್ಲೂ ತೆರೆ ಕಂಡಿದೆ. ಇದೇ ತಿಂಗಳು 5 ರಿಂದ 11ನೇ ತಾರೀಖಿನವರೆಗೂ ಒಂದು ವಾರ ಪ್ರತಿನಿತ್ಯ ಪ್ರದರ್ಶನ ಕಾಣಲಿದೆ ಕುರುಕ್ಷೇತ್ರ ಚಿತ್ರ. ಪ್ರಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ ಎನ್ನುತ್ತಿದ ಚಿತ್ರ ತಂಡ.
ಹೌದು, ಕನ್ನಡದ ಬಹುನಿರೀಕ್ಷಿ ಚಿತ್ರ ‘ಮುನಿರತ್ನ ಕುರುಕ್ಷೇತ್ರ’ವು ಆಗಸ್ಟ್ 9, 2019ರಂದು ಜಗತ್ತಿನಾದ್ಯಂತ 5 ಭಾಷೆಗಳಲ್ಲಿ ಬಿಡಗಡೆಯಾಗಿದೆ. ಕರ್ನಾಟಕದಲ್ಲಿ ಧೋಳೆಬ್ಬಿಸಿದ ಚಿತ್ರ ಸದ್ಯ ಕುರುಕ್ಷೇತ್ರ ಯುಎಇ, ಓಮನ್ ಮತ್ತು ಬಹ್ರೇನ್ನಲ್ಲಿ ಬಿಡುಗಡೆಯಾಗಿದೆ.
ಈ ವೇಳೆ ರಾಘವೇಂದ್ರ ರಾಜುಕುಮಾರ್, ರಕ್ಷಿತ್ ಶೆಟ್ಟಿ , ಕಾರ್ಮ್ ಚಾವ್ಲಾ, ವಿನಯ್ ರಾಜ್ಕುಮಾರ್, ಅನುಷಾ ರಂಗ್ನಾಥ್ ಭಾಗಿಯಾಗಿದ್ದರು.