ನಾರಾಯಣಗೌಡಗೆ ಓಪನ್ ಚಾಲೆಂಜ್ ಹಾಕಿದ ಜೆಡಿಎಸ್ ಟಿಕೇಟ್ ಆಕಾಂಕ್ಷಿ ಕೃಷ್ಣೇಗೌಡ….
ಕೆ.ಆರ್.ಪೇಟೆ ಜೆಡಿಎಸ್ ಮುಖಂಡರಿಂದ ಅನರ್ಹ ಶಾಸಕನ ವಿರುದ್ದ ಆರೋಪ ಮುಂದುವರೆದಿದೆ.
ಮಂಡ್ಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣೇಗೌಡ, ನಾರಾಯಣಗೌಡಗೆ ಜೆಡಿಎಸ್ ಟಿಕೇಟ್ ಆಕಾಂಕ್ಷಿ ಕೃಷ್ಣೇಗೌಡ ಓಪನ್ ಚಾಲೆಂಜ್ ಹಾಕಿದ್ದಾರೆ. ನಾರಾಯಣಗೌಡಗೆ ನಾನು ಓಪನ್ ಚಾಲೆಂಜ್ ಹಾಕ್ತೀನಿ. ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ, ಅವನು ಸ್ಪರ್ಧೆ ಮಾಡಲಿ ನೋಡೋಣಾ ಎಂದು ಅನರ್ಹ ಶಾಸಕ ನಾರಾಯಣಗೌಡ ವಿರುದ್ಧ ಕೆ.ಆರ್.ಪೇಟೆ ಜೆಡಿಎಸ್ ಟಿಕೇಟ್ ಆಕಾಂಕ್ಷಿ ಕೃಷ್ಣೇಗೌಡ ವಾಗ್ದಾಳಿ ಮಾಡಿದ್ದಾರೆ.
ದೇವೇಗೌಡ ವಿರುದ್ಧ ಮಾತನಾಡಿದ್ರೆ ಬೇರೆ ಪಕ್ಷದವರು ನೋಡುತ್ತಾರೆ ಅಂತಾ ಹೀಗೆ ಮಾಡ್ತಾ ಇದಾನೆ. ಅನರ್ಹ ಶಾಸಕ ನಾರಾಯಣಗೌಡ ಒಬ್ಬ ಕಳ್ಳ ಕಳ್ಳನ ಮನಸ್ಸು ಒಳ ಒಳಗೆ. ಅದಕ್ಕೆ ಅವರು ಅವರು ಸರಿ ಇಲ್ಲ ಅಂತಾ ಇವನು ಸರಿ ಇಲ್ಲ ಅಂತಟ ಹೇಳ್ತಾ ಇದಾನೆ.
ಇವನು ಎಲ್ಲರಿಗೂ ಬಾಂಬೆ ಟೋಪಿ ಹಾಕ್ತಾ ಇದಾನೆ. ಈಗ ಯಡಿಯೂರಪ್ಪ ಅವರ ಬಳಿ ಹೋಗಿದ್ದಾನೆ. ಯಡಿಯೂರಪ್ಪಗೂ ಬಾಂಬೆ ಟೋಪಿ ಆಗ್ತಾನೆ ನೋಡಿ. ಯಡಿಯೂರಪ್ಪ ಅವರು ಹುಷಾರಾಗಿ ಇರಬೇಕು ಎಂದಿದ್ದಾರೆ.