ನನಗೂ ಬಿಜೆಪಿಯಿಂದ ಆಫರ್ ಇತ್ತು – ಮಾಜಿ ಸಂಸದ ಧೃವನಾರಾಯಣ್ ಹೊಸ ಬಾಂಬ್
ನನಗು ಬಿಜೆಪಿಯಿಂದ ಆಫರ್ ಇತ್ತು ಎಂದು ಹುಣಸೂರು ಚುನಾವಣಾ ಪ್ರಚಾರದ ವೇಳೆ ಮಾಜಿ ಸಂಸದ ಧೃವನಾರಾಯಣ್ ಹೊಸ ಬಾಂಬ್ ಸಿಡಿಸಿದ್ದಾರೆ.
ಶ್ರೀನಿವಾಸ್ ಪಕ್ಷ ಬಿಟ್ಟಾಗ ನನ್ನನ್ನು ಪಕ್ಷಕ್ಕೆ ಬನ್ನಿ ಅಂತ ಕರೆದರು. ಬಿಜೆಪಿಯ ದೊಡ್ಡ ದೊಡ್ಡ ನಾಯಕರೇ ಕರೆದರು. ಸಚಿವರನ್ನಾಗಿ ಮಾಡ್ತಿವಿ ಚುನಾವಣಾ ಖರ್ಚು ನೋಡ್ಕೋತಿವಿ ಅಂದ್ರು. ಆದ್ರೆ ನಾನು ಪಕ್ಷ ಬಿಡಲಿಲ್ಲ. ನಮಗೆ ಪಕ್ಷ ತಾಯಿಯ ಸಮಾನ ಅದಕ್ಕೆ ಪಕ್ಷ ಬಿಡಲಿಲ್ಲ ಎಂದು ಪಕ್ಷ ಬಿಟ್ಟ ಅನರ್ಹ ಶಾಸಕರಿಎ ಪರೋಕ್ಷವಾಗಿ ಟಾಂಗ್ ಕೊಟ್ಟರು.