ಕೃಷ್ಣ, ಘಟಪ್ರಭಾ ಪ್ರವಾಹದಲ್ಲಿ ಕೊಚ್ಚಿ ಹೋದರು ಇಬ್ಬರು ಶವ ಇನ್ನೂ ಸಿಕ್ಕಿಲ್ಲ!
ಬೆಳಗಾವಿಯಲ್ಲಿ ಜಿಲ್ಲೆಯಲ್ಲಿ ಕೃಷ್ಣ, ಘಟಪ್ರಭಾ ನದಿಯ ಪ್ರವಾಹಕ್ಕೆ ಸಿಕ್ಕು ಅನೇಕ ಜನ ಮೃತಪಟ್ಟಿದ್ದಾರೆ.
ಆದರೇ ಹೀಗೆ ಪ್ರವಾಹದಲ್ಲಿ ಕೊಚ್ಚಿ ಹೋದವರ ಪೈಕಿ ಇಬ್ಬರ ಶವಗಳು ಮಾತ್ರ ಇನ್ನೂ ಸಿಕ್ಕಿಲ್ಲ. ಇದು ಕುಟುಂಬಸ್ಥರ ತೀವ್ರ ಆತಂಕಕ್ಕೆ ಕಾರಣವಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದ 28 ವರ್ಷದ ಯುವಕ ಶಿವಾನಂದ ನಾಯಕ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಈ ವಿಚಾರವನ್ನ ಪೋಷಕರಿಗೆ ಸ್ವತಃ ಪೊಲೀಸರೆ ತಿಳಿಸಿದ್ದಾರೆ. ಆದರೇ ಈ ವರೆಗೆ ಕೊಚ್ಚಿಕೊಂಡು ಹೋಗದ ಶಿವಾನಂದ ನಾಯಕ್ ಶವ ಇನ್ನೂ ಪತ್ತೆಯಾಗಿಲ್ಲ. ಕಳೆದ 28 ದಿನಗಳ ಹಿಂದೆ ನಡೆದಿದ್ದು ಶವ ಪತ್ತೆಯಾಗದೇ ಇರೋದು ಕುಟುಂಬದ ಆತಂಕ ಎಚ್ಚಿಸಿದೆ. ಇನ್ನೂ ಶಿವಾನಂದ ಬಳಸಿದ್ದ ಸೈಕಲ್ ಇತ್ತೀಚಿಗೆ ಪತ್ತೆಯಾಗಿದೆ.
ಇನ್ನೂ ಅಥಣಿ ತಾಲೂಕಿನ ತೀರ್ಥ ಗ್ರಾಮದ ಬಸವರಾಜ್ ಕಾಂಬಳೇ ಎಂಬ 14 ವರ್ಷದ ಬಾಲಕ ಕೊಚ್ಚಿಕೊಂಡು ಹೋಗಿದ್ದಾನೆ. ತುಂಬಿದ ನದಿಯಲ್ಲಿ ಈಜಲು ಹೋಗಿದ್ದಾಗ ಈ ಘಟನೆ ಸಂಭವಿಸಿದೆ. ಆದರೇ ಇನ್ನೂ ಬಾಲಕನ ಶವ ಪತ್ತೆಯಾಗಿಲ್ಲ.