ಈ ಬಾರಿ ಪರಿಸರ ಸ್ನೇಹಿ ಹುಟ್ಟು ಹಬ್ಬ ಆಚರಿಸಿಕೊಳ್ಳಲು ರಿಯಲ್ ಸ್ಟಾರ್ ನಿರ್ಧಾರ
ಇದೇ ಸೆಪ್ಟಂಬರ್ 18ರಂದು ಉಪೇಂದ್ರ ಹುಟ್ಟುಹಬ್ಬ. ಈ ಬಾರಿ ಹಸಿರು ಹುಟ್ಟುಹಬ್ಬ / ಗ್ರೀನ್ ಬರ್ತಡೇ/ ಪರಿಸರ ಸ್ನೇಹಿ ಹುಟ್ಟು ಹಬ್ಬ ಆಚರಿಸಿಕೊಳ್ಳಲು ರಿಯಲ್ ಸ್ಟಾರ್ ಉಪೇಂದ್ರ ನಿರ್ಧಾರ ಮಾಡಿದ್ದಾರೆ.
ಹೀಗಾಗಿ ಹುಟ್ಟುಹಬ್ಬದಂದು ಕೇಕ್, ಹಾರ, ಉಡುಗೊರೆ ತರದಿರಲು ಅಭಿಮಾನಿಗಳಿಗೆ ರಿಯಲ್ ಸ್ಟಾರ್ ಉಪೇಂದ್ರ ಮನವಿ ಮಾಡಿದ್ದಾರೆ. ಉಡುಗೊರೆ ನೀಡಲೇಬೇಕು ಅನಿಸಿದರೆ ಗಿಡಗಳನ್ನು ತರಲು ಉಪ್ಪಿ ತಿಳಿಸಿದ್ದಾರೆ. ಅಭಿಮಾನಿಗಳು ತಂದು ಕೊಟ್ಟ ಗಿಡಗಳುನ್ನು ನೆಟ್ಟು ಪೋಷಿಸುವ ಜವಾಬ್ದಾರಿಯನ್ನು ರಿಯಲ್ ಸ್ಟಾರ್ ಹೊತ್ತಿದ್ದಾರೆ.
ರಿಯಲ್ ಸ್ಟಾರ್ ಉಪ್ಪಿ ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡಿದ್ದು ಹೀಗೆ……
ಪ್ರೀತಿಯ ಅಭಿಮಾನಿಗಳಲ್ಲಿ ವಿನಂತಿ…
ಸೆಪ್ಟೆಂಬರ್ 18 “ಅಭಿಮಾನಿಗಳ ದಿನ”, ಅಂದು ದಯವಿಟ್ಟು ತಾವುಗಳು ಯಾರೂ ಕೇಕ್, ಹೂವಿನ ಹಾರ ಹೂಗುಚ್ಛ ಮತ್ತು ಉಡುಗೊರೆಗಳನ್ನು ತರಬೇಡಿ.. ತರಲೇ ಬೇಕು ಎಂದೆನಿಸಿದರೆ ಗಿಡಗಳನ್ನು ತನ್ನಿ. ಮುಂದೆ ಅದನ್ನು ಪೋಷಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ…
-ನಿಮ್ಮ ಉಪೇಂದ್ರ