ಇಂಡಿಯನ್ ಸ್ಪೋರ್ಟ್ಸ್ ಹಾನರ್ ಅವಾರ್ಡ್ ನಲ್ಲಿ ಕಾಫಿನಾಡಿನ ಯುವತಿಗೆ ಗೌರವ….
ಇಂಡಿಯನ್ ಸ್ಪೋರ್ಟ್ಸ್ ಹಾನರ್ ಅವಾರ್ಡ್ ನಲ್ಲಿ ಕಾಫಿನಾಡಿನ ಯುವತಿಗೆ ಗೌರವ ಸಂದಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುಡ್ನಹಳ್ಳಿ ಯುವತಿ ರಕ್ಷಿತಾ ರಾಜು ಆಶಾಕಿರಣ ಅಂಧ ಮಕ್ಕಳ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ.ಹಾಲಿವುಡ್, ಬಾಲಿವುಡ್ ದಿಗ್ಗಜರ ಜೊತೆ ಗೌರವ ಪಡೆದ ಕನ್ನಡದ ಹೆಮ್ಮೆಯ ಪುತ್ರಿ.
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಫೌಂಡೇಶನ್ ವತಿಯಿಂದ ಚಿತ್ರೋದ್ಯಮ, ಕ್ರಿಕೆಟ್, ಅಥ್ಲೆಟಿಕ್ಸ್ ನಲ್ಲಿ ಸಾಧನೆ ಮಾಡಿದವರಿಗೆ ಈ ಅವಾರ್ಡ್ ನೀಡಲಾಗುತ್ತಿದ್ದು, ಕರ್ನಾಟಕದಿಂದ ಆಯ್ಕೆಯಾಗಿದ್ದ ಚಿಕ್ಕಮಗಳೂರಿನ ರಕ್ಷಿತಾ ರಾಜು ಅವರಿಗೆ ಈ ಪ್ರಶಸ್ತಿ ಲಭಿಸಿದೆ.
ರಕ್ಷಿತಾ, ಏಷ್ಯ ಪ್ಯಾರಾ ಗೇಮ್ಸ್ ನಲ್ಲಿ 1500 ಮೀ.ಓಟದಲ್ಲಿ ಚಿನ್ನ ಗೆದಿದ್ರು. ಪ್ರಧಾನಿ ಮೋದಿಯಿಂದಲೂ ಮೆಚ್ಚುಗೆ ಪಡೆದಿದ್ದರು. ಕನ್ನದಲ್ಲೇ ಮಾತನಾಡಿ ಗೌರವದ ಸಂತಸ ರಕ್ಷಿತಾ ಹಂಚಿಕೊಂಡಿದ್ದಾರೆ. ಅಮಿತಾ ಬಚ್ಚನ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್. ಪ್ರಿಯಾಂಕ ಚೋಪ್ರಾ ಸೇರಿ ಹಲವು ಗಣ್ಯರು, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಲವು ರಾಜ್ಯದ ಗಣ್ಯರು ಭಾಗಿಯಾಗಿದ್ರು.