ಆರ್ ಟಿಪಿಎಸ್ ಘಟಕದ ಬಂಕರ್ ನಲ್ಲಿ ಕೈ ಸಿಲುಕಿ ಉದ್ಯೋಗಿ ಸಾವು : ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಬಂಕರ್ ನಲ್ಲಿ ಕೈ ಸಿಲುಕಿಕೊಂಡು ಉದ್ಯೋಗಿ ಸಾವನ್ನಪ್ಪಿದ ರಾಯಚೂರಿನ ಶಕ್ತಿನಗರದ ಆರ್ ಟಿಪಿಎಸ್ ನಲ್ಲಿ ಘಟನೆ ನಡೆದಿದೆ.
ಒರಿಸ್ಸಾ ಮೂಲದ ದೀಪಕ್ ನಾಯಕ ( 27) ಸಾವನ್ನಪ್ಪಿದ ದುರ್ದೈವಿ. ಬಂಕರ್ ನಲ್ಲಿ ಕಲ್ಲು ತೆಗೆಯುವಾಗ ಕೈ ಸಿಲುಕಿಕೊಂಡು ಉದ್ಯೋಗಿ ಸಾವನ್ನಪ್ಪಿದ್ದಾರೆ. ಘಟನೆಗೆ ಓವರ್ ಟೈಮ್ ಕೆಲಸ ನೀಡಿದ್ದರಿಂದಲ್ಲೇ ಉದ್ಯೋಗಿ ಸಾವು ಆರೋಪ ಕೇಳಿ ಬಂದಿದೆ.
ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮೃತನು ಬಂಕರ್ ಬಿದ್ದ ಭಯಾನಕವಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.