ಅಂಗನವಾಡಿ ಹಲವು ಕ್ಷೇಂದ್ರಗಳಿಗೆ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ದಿಢೀರ್ ಭೇಟಿ…
ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಕೆಸರೆರೆಚಾಟ ನಡೆಯುತ್ತಿದ್ದಂತೆ ಇತ್ತ ಜಿಲ್ಲೆಯಲ್ಲಿ ಶಾಸಕರು ಚುರುಕಾಗಿ ಕೆಲಸ ಶುರು ಮಾಡಿದ್ದಾರೆ.
ಹೌದು… ಬೆಳಗಾವಿ ಖಾನಾಪೂರ ತಾಲೂಕಿನ ಅಂಗನವಾಡಿ ಹಲವು ಕ್ಷೇಂದ್ರಗಳಿಗೆ ಸ್ಥಳೀಯ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ದಿಢೀರ್ ಭೇಟಿ ನೀಡಿದ್ದು ಗ್ರಾಮಸ್ಥರಲ್ಲಿ ಆಶ್ಚರ್ಯ ಮೂಡಿಸಿದೆ. ಮಕ್ಕಳಿಗೆ ಪೂರೈಸುವ ಆಹಾರ ಪರಿಶೀಲನೆ ಮಾಡಿವ ಮೂಲಕ ಅಂಗನವಾಡಿ ಶಿಕ್ಷಕರಿಗೆ, ಸಹಾಯಕಿಯರಿಗೆ ತರಾಟೆ ತೆಗೆದುಕೊಂಡಿದ್ದಾರೆ.
ನಂದಗಡ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಕಳಪೆ ಆಹಾರ ಪೂರೈಕೆಯಾಗುವುದನ್ನ ಗಮನಿಸಿದ, ಅಂಗನವಾಡಿ ಅವ್ಯವಸ್ಥೆ ಕುರಿತು ಶಾಸಕಿ ಅಂಜಲಿ ಅಸಮಾಧಾನ ವ್ಯಕ್ತಪಡಿಸಿದರು. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡದೇ ತಿಳಿಸಾರು ನೀಡುತ್ತಿರುವುದು ಬಹಿರಂಗ ಪಡಿಸುವ ಮೂಲಕ ಗ್ರಾಮಸ್ಥರಲ್ಲಿ ವಿಶ್ವಾಸ ಮೂಡಿಸುವತ್ತ ಹೆಜ್ಜೆ ಹಾಕಿದ್ದಾರೆ.
ತರಕಾರಿ ಸಾರು ಮಾಡಿರುವುದಾಗಿ ಸುಳ್ಳು ಹೇಳಿ ತಗ್ಲಾಕಿಕೊಂಡ ಅಂಗನವಾಡಿ ಸಿಬ್ಬಂದ್ಧಿಗೆ ತರಾಟೆಗೆ ತೆಗೆದುಕೊಂಡರು. ಸರ್ಕಾರದಿಂದ ಮಕ್ಕಳಿಗೆ ಮೊಟ್ಟೆ,ಹಾಲು ಸೇರಿದಂತೆ ಪೌಷ್ಟಿಕ ಆಹಾರ ಪೂರೈಕೆಯಾಗುತ್ತಿದ್ದರೂ , ಸಿಬ್ಬಂದಿಗಳು ಪೌಷ್ಟಿಕ ಆಹಾರ ನೀಡದೇ ಮಕ್ಕಳಿಗೆ ವಂಚಿಸುತ್ತಿದ್ದಾರೆ. ನಿಮ್ಮ ಮಕ್ಕಳಾಗಿದ್ದರೆ ಇಂತದ್ದೇ ಆಹಾರ ನೀಡುತ್ತಿದ್ದೀರಾ..?
ನಿಮಗೆ ಕನಿಷ್ಠ ಮಾನವೀಯತೆ ಇಲ್ಲವೇ…? ಅಂತಾ ತರಾಟೆ ತೆಗೆದುಕೊಂಡರು.ನಂದಗಡ ಅಂಗನವಾಡಿ ಕೇಂದ್ರದ ಅಂಗನವಾಡಿ ಸಿಬ್ಬಂದ್ಧಿ ತಪ್ಪು ಒಪ್ಪಿಕೊಂಡರು ಬಿಡದ ಶಾಸಕಿ ಅಮಾನತೆಗೆ ಶಾಸಕರ ಸೂಚನೆ ನೀಡಿದ್ದಾರೆ.