ಕೃಷಿಯಲ್ಲಿ ನಷ್ಟಕಂಡು ಸಾಲಬಾದೆಯಿಂದ ಯುವರೈತ ಆತ್ಮಹತ್ಯೆ…!
ಸಾಲಬಾದೆ ಹೆಚ್ಚಾಗಿ ನೇಣು ಬಿಗಿದುಕೊಂಡು ಯುವರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ದೋರನಹಳ್ಳಿ ಗ್ರಾಮದ ಜಮೀನೊಂದರಲ್ಲಿ ನಡೆದಿದೆ.
ಯಾದಗಿರಿಯ ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಯುವರೈತ ಸುಭಾಶ ತಂದೆ ಶಿವಪ್ಪ ನಾಟೇಕಾರ (೩೫) ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಯುವರೈತ.
ಮೃತನ ತಂದೆ ಹೆಸರಿನಲ್ಲಿ ಎರಡು ಎಕರೆ ಜಮೀನಿದ್ದು ಬೆಸಾಯ ಮಾಡುತ್ತಿದ್ದ. ಕೃಷಿಯಲ್ಲಿ ಕಳೆದ ಎರಡು ವರ್ಷದಿಂದ ನಷ್ಟ ಅನುಭವಿಸಿದ್ದು ಸಾಲ ತೀರಿಸಲು ಆಗಿರಲಿಲ್ಲ. ಇದರಿಂದ ಬೇಸತ್ತು ಮಂಗಳವಾರ ಮುಂಜಾನೆ ತಮ್ಮ ಜಮೀನಿನ ಪಕ್ಕದ ಜಮೀನಿನಲ್ಲಿ ತನ್ನ ಪ್ಯಾಂಟಿನಿಂದ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.
ಮೃತ ರೈತ ಪಿಕೆಜಿಬಿಯಲ್ಲಿ ೩೦ ಸಾವಿರ, ಮತ್ತು ಕೈಸಾಲ ೧೧ ಲಕ್ಷ ರೂಪಾಯಿಗಳು ಮೃತ ರೈತನಿಗೆ ಹೆಂಡತಿ ಅಯ್ಯಮ್ಮ ಮತ್ತು ಇಬ್ಬರು ಹೆಣ್ಣು ಮಕ್ಕಳಾದ ಮಲ್ಲಿಕಾ ೪ ವರ್ಷ, ಮೈತ್ರಾ ೨ ವರ್ಷವಿದ್ದು ಪುಟ್ಟ ಕಂದಮ್ಮಗಳನ್ನು ಅಗಲಿದ್ದಾನೆ ತಂದೆ ಶಿವಪ್ಪ , ತಾಯಿ ಕಸ್ತೂರಿ ಹಾಗೂ ಅಣ್ಣ ತಮ್ಮಂದಿರು, ಬಂಧು ಬಳಗದವರ ಆಕ್ರಂದನ ಮುಗಿಲು ಮುಟ್ಟಿದ್ದು. ಶಹಾಪುರ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಶಹಾಪುರ ತಾಲ್ಲೂಕ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿದೆ.