ದೇಶವನ್ನು ತಾರತಮ್ಯ ಮುಕ್ತಗೊಳಿಸುವುದೇ ಅಂಬೇಡ್ಕರ್ಗೆ ಸಲ್ಲಿಸುವ ಗೌರವ: ರಾಹುಲ್ಗಾಂಧಿ
ದೇಶವನ್ನು ತಾರತಮ್ಯ ಮುಕ್ತಗೊಳಿಸುವುದು, ಅದಕ್ಕಾಗಿ ಕೆಲಸ ಮಾಡುವುದು ಅಂಬೇಡ್ಕರ್ಗೆ ಗೌರವ ಸಲ್ಲಿಸುವ ಏಕೈಕ ಮಾರ್ಗ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 64ನೇ ಮಹಾ ಪರಿನಿರ್ವಾಹಣಾ ದಿನದ ಅಂಗವಾಗಿ ಅಂಬೇಡ್ಕರ್ ಅವರಿಗೆ ಟ್ವೀಟ್ ಮೂಲಕ ಗೌರವ ಸಲ್ಲಿಸಿರುವ ರಾಹುಲ್ ಗಾಂಧಿ, ರಾಷ್ಟ್ರ ನಿರ್ಮಾಣಕ್ಕೆ ಡಾ. ಅಂಬೇಡ್ಕರ್ ನೀಡಿದ ಕೊಡುಗೆಯನ್ನು ನಾವು ಇಂದು ನೆನಪಿಸಿಕೊಳ್ಳುತ್ತೇವೆ. ಭಾರತವನ್ನು ಎಲ್ಲಾ ರೀತಿಯ ತಾರತಮ್ಯಗಳಿಂದ ಮುಕ್ತಗೊಳಿಸಲು ಕೆಲಸ ಮಾಡುವುದೇ ಅವರಿಗೆ ಗೌರವ ಸಲ್ಲಿಸುವ ಏಕೈಕ ಸತ್ಯ ಮಾರ್ಗವಾಗಿದೆ ಎಂದಿದ್ದಾರೆ.
Today we remember Dr Ambedkar’s contribution to nation building.
Working to make India free from all forms of discrimination is the only truthful way to pay homage to him.
— Rahul Gandhi (@RahulGandhi) December 6, 2020
ದೇಶದ ಮೊದಲ ಕಾನೂನು ಸಚಿವರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ 1956ರಲ್ಲಿ ಮಹಾ ಪರಿನಿರ್ವಹಣಾರಾಗಿದ್ದರು. ಈ ದಿನವನ್ನು ಮಹಾ ಪರಿನಿರ್ವಾಹಣಾ ದಿನವಾಗಿ ಆಚರಿಸಲಾಗುತ್ತಿದೆ.
ಇದನ್ನೂ ಓದಿ: ಪರಿಷತ್ ಚುನಾವಣೆ: ಮೋದಿ ಕ್ಷೇತ್ರದಲ್ಲಿ BJPಗೆ ಹೀನಾಯ ಸೋಲು!