ಬೊಮ್ಮಾಯಿ ಜೆಡಿಎಸ್ ಒದ್ದು ಹೊರಬಂದಿದ್ದೇಕೆ? ಹೆಚ್ಡಿಕೆಗೆ ಈಶ್ವರಪ್ಪ ಟಾಂಗ್!
ರಾಜ್ಯದಲ್ಲಿ ನೂತನವಾಗಿ ಸಿಎಂ ಆಗಿರುವ ಬಸವರಾಜ ಬೊಮ್ಮಾಯಿ ನಮ್ಮ ಪ್ರಾಡಕ್ಟ್ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಇದಕ್ಕೆ ಈಶ್ವರಪ್ಪ ಪ್ರತಿಕ್ರಿಯಿಸಿದ್ದು, ಬೊಮ್ಮಾಯಿ ಅವರು ಜೆಡಿಎಸ್ ಒದ್ದು ಹೊರ ಬಂದಿದ್ದೇಕೆ ಕುಮಾರಸ್ವಾಮಿ ಅವರೇ? ಮೊದಲು ಅದಕ್ಕೆ ಉತ್ತರಿಸಿ ಎಂದು ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಬಸವರಾಜ ಬೊಮ್ಮಾಯಿ ಜನತಾದಳವನ್ನು ಒದ್ದು ಬಿಜೆಪಿಗೆ ಬಂದವರು. ಅವರ ಏಕೆ ಜೆಡಿಎಸ್ ತೊರೆದರು? ಮೊದಲು ಅದರ ಬಗ್ಗೆ ಹೇಳಿ ಕುಮಾರಸ್ವಾಮಿಯವರೇ… ಬಿಜೆಪಿಯಲ್ಲಿ ಪಕ್ಷ, ಸಂಘಟನೆ, ಸಿದ್ದಾಂತ ಒಪ್ಪಿದವರಿಗೆ ಯಾವ ಸ್ಥಾನಮಾನವಾದರೂ ಕೊಡ್ತೇವಿ ಅನ್ನೋದಕ್ಕೆ ಬೊಮ್ಮಾಯಿ ಸಾಕ್ಷಿ ಎಂದು ಅವರು ಹೇಳಿದ್ದಾರೆ.
ನಮ್ಮ ಕಡೆ ಬಂದ ಯಾವ ಕಾರ್ಯಕರ್ತರನ್ನು ತಿರಸ್ಕಾರ ಭಾವನೆಯಿಂದ ನೋಡಲ್ಲ. ಕುಮಾರಸ್ವಾಮಿ ಅವರೇ ನಿಮ್ಮಿಂದ ಇನ್ನು ಎಷ್ಟು ಜನ ಬರ್ತಾರೆ ಗೊತ್ತಿಲ್ಲ. ಜೆಡಿಎಸ್ ಪಕ್ಷ ಮುಚ್ಚುತ್ತೇವೆ ಎಂದು ಒಪ್ಪಿಕೊಂಡು ಬಿಡಿ. ಬಿಜೆಪಿಯಲ್ಲೇ ನಮ್ಮವರಿಗೆ ಸ್ಥಾನಮಾನ ಸಿಗುತ್ತದೆ. ಅದಕ್ಕೆ ಜನತಾದಳ ಯಾಕೆ ಇರಬೇಕು ಅಂತ ತೀರ್ಮಾನ ಮಾಡಿ. ಆನಂದ ಪಡಿ. ಆದ್ರೆ ನಿಮ್ಮ ಶಾಸಕರನ್ನು ಉಳಿಸಿಕೊಳ್ಳಿ, ಪಕ್ಷ ಕಟ್ಟಿಕೊಳ್ಳಿ ಎಂದು ಎಚ್ಡಿಕೆಗೆ ಈಶ್ವರಪ್ಪ ಹೇಳಿದ್ದಾರೆ.
ಇದನ್ನೂ ಓದಿ: ಅತ್ಯಾಚಾರ ಪ್ರಕರಣ; ಅಪರಾಧಿ ಪಾದ್ರಯನ್ನೇ ವಿವಾಹವಾಗಲು ಸಂತ್ರಸ್ತೆ ಸುಪ್ರೀಂನಲ್ಲಿ ಮನವಿ!