‘ಹಳ್ಳಿಹಕ್ಕಿಗೆ ಚಾಮುಂಡೇಶ್ವರಿ ಶಾಪ್’ ಹೇಳಿಕೆ : ಸಾ.ರಾ ಮಹೇಶ್ ಗೆ ವ್ಯಂಗ್ಯವಾಗಿ ತಿರುಗೇಟು ಕೊಟ್ಟ ಗೋಕಾಕ್ ಸಾಹುಕಾರ!

ಸಚಿವಾಕಾಂಕ್ಷಿಯಾಗಿದ್ದ ಮಾಜಿ ಸಚಿವ ಹೆಚ್ ವಿಶ್ವನಾಥ್ ಗೆ ಚಾಮುಂಡೇಶ್ವರಿ ಶಾಪ್ ತಟ್ಟಿದೆ ಎಂದು ಸಾ.ರಾ ಮಹೇಶ್ ಕೊಟ್ಟಿದ್ದ ಹೇಳಿಕೆಗೆ ವ್ಯಂಗ್ಯವಾಗಿ ತಿರುಗೇಟು ಕೊಟ್ಟಿದ್ದಾರೆ ಗೋಕಾಕ್ ಸಾಹುಕಾರ. ‘ಇದು ರಾಜಕೀಯ. ಇದೆಲ್ಲಾ ಶಾಪ್ ಅನ್ನೋದಕ್ಕೆ ಆಗೋದಿಲ್ಲ. ಇದೆಲ್ಲಾ ಕಾಮನ್’ ಎಂದು ರಮೇಶ್ ಸಾರಾ ಮಹೇಶ್ ಗೆ ಕೌಂಟರ್ ಕೊಟ್ಟಿದ್ದಾರೆ.

ಹೌದು… ಮೈತ್ರಿ ಸರ್ಕಾರ ತೊರೆದು ಬಿಜೆಪಿ ಸರ್ಕಾರ ಸೇರಿದ ಸಚಿವಾಕಾಂಕ್ಷಿ ಹೆಚ್ ವಿಶ್ವನಾಥ್ ಬಿಜೆಪಿ ಸರ್ಕಾರದ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ. ಬಿಜೆಪಿ ಹೈಕಮಾಂಡ್ ಗೆ ಸಚಿವರಾಗಿ ಆಯ್ಕೆ ಮಾಡಲು ನಾಲ್ಕು ಜನರ ಪೈಕಿ ನನ್ನ ಹೆಸರು ಮೊದಲು ಇತ್ತು. ಆದರೆ ಹೈಕಮಾಂಡ್ ಜೊತೆ ಮಾತನಾಡು ಹೋಗಿದ್ದ ಕೋರ್ ಕಮಿಟಿ ವಾಪಸ್ ಬರುವಾಗ ನನ್ನ ಹೆಸರು ತೆಗೆದು ಹಾಕಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸರ್ಕಾರ ಮಾತ್ರವಲ್ಲದೇ ಜೊತೆಗೆ ಮೈತ್ರಿ ಸರ್ಕಾರ ಬಿಟ್ಟ 17 ಶಾಸಕರೂ ತಮ್ಮ ಕೈಬಿಟ್ಟಿದ್ದಾರೆ. ನಮ್ಮಿಂದ ಸರ್ಕಾರ ಬಂದರೂ ನಮ್ಮೊಂದಿಗೆ ಬಿಜೆಪಿ ಸರ್ಕಾರ ನಿಲ್ಲಲ್ಲಿಲ್ಲ. ಎಲ್ಲವನ್ನೂ ನಾನು ಎದುರಿಸುತ್ತೇನೆ. ಸಚಿವ ಸ್ಥಾನದ ಕನಸ್ಸು ಕಾಣುತ್ತಿದ್ದ ಹಳ್ಳಿಹಳ್ಳಿ ಬೇಸರ ವ್ಯಕ್ತಪಡಿಸಿದೆ.

ಈ ವೇಳೆ ಸಾರಾ ಮಹೇಶ್ ಬಗ್ಗೆ ಮಾತನಾಡಿದ ಹಳ್ಳಿಹಕ್ಕಿ ‘ ಸಾರಾ ಮಹೇಶ್ ಒಬ್ಬ ಕೊಚ್ಚೆ ಗುಂಡಿ. ನಾನು ಆ ಕೊಚ್ಚೆ ಗುಂಡಿಗೆ ಕಲ್ಲು ಹಾಕಿ ನಾನು ಗಲೀಜು ಆಗೋದಿಲ್ಲ’ ಎಂದಿದ್ದಾರೆ.

ಹೆಚ್ ವಿಶ್ವನಾಥ್ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ರಮೇಶ್ ಜಾರಕಿಹೊಳಿ,’ ಹೆಚ್ ವಿಶ್ವನಾಥ್ ಅವರೊಂದಿಗೆ ನಾವೆಲ್ಲರೂ ಇದ್ದೇವೆ ಎಂದಿದ್ದಾರೆ. ಹೈಕೋರ್ಟ್ ಮಧ್ಯಂತರ ಆದೇಶ ಪ್ರಶ್ನಿಸಿ ನಾವು 17 ಜನ ಶಾಸಕರು ಸುಪ್ರೀಂ ಕೋರ್ಟ್ ಬಾಗಿಲು ತಟ್ಟುತ್ತೇವೆ’ ಎಂದು ಹುಕ್ಕೇರಿಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights