Verification: ಮುಸ್ಲಿಮರ ವಿರುದ್ಧ ಅವಹೇಳಕಾರಿಯಾಗಿ ಮಾತನಾಡಿದ ಕಾನ್ಪುರ ವೈದ್ಯಕೀಯ ಕಾಲೇಜು ಪ್ರಾಂಶುಪಾಲೆ!
ಜೂನ್ 1 ರವೇಳೆಗೆ, ಮಹಿಳೆಯೊಬ್ಬರು ಮುಸ್ಲೀಂ ಸಮುದಾಯದ ವಿರುದ್ಧ ಮಾತನಾಡಿದ್ದ ಐದು ನಿಮಿಷಗಳ ವಿಡಿಯೋ ವೈರಲ್ ಆಗಿತ್ತು.
ಆಕೆ, “ಈ ಜನರು ಭಯೋತ್ಪಾದಕರು. ನಾವು ಅವರಿಗೆ ವಿಐಪಿ ಚಿಕಿತ್ಸೆ ನೀಡುತ್ತಿದ್ದೇವೆ… ನಾವು ಅವರಿಗಾಗಿ ನಮ್ಮ ಸಂಪನ್ಮೂಲಗಳನ್ನು ಖರ್ಚು ಮಾಡಿ ಖಾಲಿ ಮಾಡುತ್ತಿದ್ದೇವೆ. ನಮ್ಮ ವೈದ್ಯರಿಗೆ ಅನಾರೋಗ್ಯವನ್ನುಂಟುಮಾಡುತ್ತಿದ್ದೇವೆ… ನಾವು ಅವರ ಮೇಲೆ ದಿನಕ್ಕೆ 100 ಪರೀಕ್ಷಾ ಕಿಟ್ಗಳನ್ನು ಬಳಸುತ್ತಿದ್ದೇವೆ, ಅವರು ಇಲ್ಲದಿದ್ದರೆ, ನಾವು ಕಿಟ್ಗಳನ್ನು ಬಳಸುವ ಅಗತ್ಯವಿರಲಿಲ್ಲ… ಈ ಜನರನ್ನು ಹೊಡೆಯಬೇಕು ಮತ್ತು ಒಂಟಿಯಾಗಿ ಬಂಧನದಲ್ಲಿಡಬೇಕು… ಯೋಗಿ ಜಿ ಅವರು ರಾಜ್ಯದ ಸಂಪನ್ಮೂಲಗಳನ್ನು ಅವರ ಮೇಲೆ ಬಳಸುವುದಿಲ್ಲ ಎಂಬ ಆದೇಶವನ್ನು ನೀಡಲು ಸಾಧ್ಯವಿಲ್ಲವೇ .. ಈ 20 ಕೋಟಿ ಜನರಿಗೆ ನಾವು ರಾಷ್ಟ್ರದ 100 ಕೋಟಿ ರೂ. ಖರ್ಚುಮಾಡಬೇಕಿದೆ ” (ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಅಂದಾಜು 20 ಕೋಟಿ.) ಎಂದು ವಿಡಿಯೋದಲ್ಲಿ ಹೇಳಿದ್ದರು.
‘ನ್ಯೂಸ್ इंडिया 1’ (ನ್ಯೂಸ್ ಇಂಡಿಯಾ1) ಮಾಡಿದ್ದ ಸಂದರ್ಶನದಲ್ಲಿ ಆಕೆ ಈ ಹೇಳಿಕೆಗಳನ್ನು ನೀಡಿದ್ದರು. ಸಂದರ್ಶನ ಮಾಡಲಾಗಿರು ಮಹಿಳೆ ಕಾನ್ಪುರದ ಜಿವಿಎಸ್ಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಆರತಿ ಲಾಲ್ಚಂದಾನಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಲಾಗಿತ್ತು.
ಫ್ಯಾಕ್ಟ್-ಚೆಕ್
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಸತ್ಯ. ವೀಡಿಯೊದಲ್ಲಿರುವ ಮಹಿಳೆ ನಿಜಕ್ಕೂ ಕಾನ್ಪುರದ ಜಿವಿಎಸ್ಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಆರತಿ ಲಾಲ್ಚಂದಾನಿ. ಜೂನ್ 1 ರಂದು, ದಿ ಹಿಂದೂ ಮತ್ತು ದಿ ಇಂಡಿಯನ್ ಎಕ್ಸ್ ಪ್ರೆಸ್ ಸೇರಿದಂತೆ ಹಲವಾರು ಮಾಧ್ಯಮಗಳು ವೈರಲ್ ವಿಡಿಯೋ ಬಗ್ಗೆ ವರದಿಯನ್ನು ಪ್ರಕಟಿಸಿವೆ. ದಿ ಹಿಂದೂ ಪ್ರಕಾರ, “ವಿಡಿಯೋವನ್ನು ಮಾರ್ಫಡ್ ಮಾಡಲಾಗಿದೆ” ನಾನು ಯಾವುದೇ ಸಮುದಾಯವನ್ನು ಉಲ್ಲೇಖಿಸಿಲ್ಲ, ಮುಸ್ಲೀಮರನ್ನು ಗುರಿಯಾಗಿಸಿಕೊಂಡು ಮಾತನಾಡಿಲ್ಲ ಎಂದು ಎಂದು ಲಾಲ್ಚಂದಾನಿ ಹೇಳಿದ್ದಾರೆ. ಆದರೆ, ಕಾನ್ಪುರದಲ್ಲಿ ಕೊರೊನಾ ಬಿಕ್ಕಟ್ಟಿನ ಆರಂಭಿಕ ದಿನಗಳಲ್ಲಿ ತಾನು ಈ ಹೇಳಿಕೆಗಳನ್ನು ನೀಡಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ.
ವಾಟ್ಸಾಪ್ ಮೂಲಕ ಕಳುಹಿಸಲಾದ ತನ್ನ ಹೇಳಿಕೆಯಲ್ಲಿ, ಲಾಲ್ಚಂದಾನಿ ಹೀಗೆ ಬರೆದಿದ್ದಾರೆ, “ನನ್ನ ಹೇಳಿಕೆಗಳು ಮಾಧ್ಯಮಕ್ಕೆ ನೀಡಿಲ್ಲ. ನಾನು ನೀಡಿರುವ ಹೇಳಿಕೆಗಳು ನನ್ನ ಆಂತರಿಕ ಭಾವನೆಗಳನ್ನು ಪ್ರತಿಬಿಂಬಿಸುವುದಿಲ್ಲ. ಕೋಪದಲ್ಲಿರುವ ತಾಯಿಯೂ ಸಹ ತನ್ನ ಮಕ್ಕಳಿಗೆ ನರಕಕ್ಕೆ ಹೋಗು ಎಂದು ಹೇಳುತ್ತಾರೆ. ತದನಂತರ ಮುಂದಿನ ಕ್ಷಣ ಅವರನ್ನು ತಬ್ಬಿಕೊಳ್ಳುತ್ತಾರೆ. ನನ್ನ ಕಾರ್ಯಗಳು ಹಾಗೆಯೇ ನಾನು ಹೇಳಿದ್ದಕ್ಕಿಂತ ಮಿಗಿಲಾಗಿ ಕೆಲಸ ಮಾಡುತ್ತೇನೆ. ನಾನು ನಿಮ್ಮೆಲ್ಲರ ಸೇವೆಯನ್ನು ಮುಂದುವರಿಸುತ್ತೇನೆ ಮತ್ತು ಅಗತ್ಯವಿರುವ ಯಾರನ್ನಾದರೂ ನೀವು ಯಾವಾಗಲೂ ಚಿಕಿತ್ಸೆಗೆ ಕಳುಹಿಸಬಹುದು. ನಾನು ನಿಮ್ಮ ಸೇವೆಗಾಗಿ 24 ಗಂಟೆಗಳ ಕಾಲ ಕೆಲಸ ಮಾಡುತ್ತೇನೆ. ” ಎಂದು ಹೇಳಿದ್ದಾರೆ.
ಆದರೆ, ಲಾಲ್ಚಂದಾನಿ ಜನಾಂಗೀಯ ಟೀಕೆಗಳಿಗೆ ಕ್ಷಮೆಯಾಚಿಸಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಆದ್ದರಿಂದ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೋ ಸತ್ಯ. ಕಾನ್ಪುರದ ಜಿವಿಎಸ್ಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಆರತಿ ಲಾಲ್ಚಂದಾನಿ ನಿಜಕ್ಕೂ ತಬ್ಲಿಘಿ ಜಮಾಅತ್ ಸದಸ್ಯರು ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಅವರ ಚಿಕಿತ್ಸೆಗಾಗಿ ಹಣ ಮತ್ತು ಸಂಪನ್ಮೂಲಗಳನ್ನು ಖರ್ಚು ಮಾಡುವ ಬದಲು ದೇಶವು ಅವರನ್ನು ಬಂಧಿಸಬೇಕು ಎಂದು ಅವರು ಹೇಳಿದ್ದಾರೆ.