ಉತ್ತರ ಕನ್ನಡ: ಮೀನುಗಾರಿಕೆ ಹೋದ ಬಾಲಕನನ್ನು ಎಳೆದೊಯ್ದ ಮೊಸಳೆ
ಕಾಳಿ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ 15 ವರ್ಷದ ಬಾಲಕನನ್ನು ಮೊಸಳೆ ಎಳೆದೊಯ್ದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸಮೀಪದಲ್ಲಿ ಭಾನುವಾರ ನಡೆದಿದೆ.
ಮೃತಪಟ್ಟ ಬಾಲಕನನ್ನು ಪಟ್ಟಣದ ವಿನಾಯಕನಗರ ನಿವಾಸಿ ಮೊಯೀನ್ ಮೊಹಮ್ಮದ್ ಗುಲ್ಬರ್ಗ್ ಎಂದು ಗುರುತಿಸಲಾಗಿದೆ. ಅವರು ಪಟ್ಟಣದ ಹೊರವಲಯದಲ್ಲಿರುವ ಹಳಿಯಾಳ ರಸ್ತೆಯ ಕಾಳಿ ನದಿಯಲ್ಲಿ ಮೀನುಗಾರಿಕೆಗೆ ಹೋದಾಗ ಈ ಘಟನೆ ಸಂಭವಿಸಿದೆ.
ಇದನ್ನೂ ಓದಿ: ಪಿಯುಸಿ ವಿದ್ಯಾರ್ಥಿನಿಯ ಅರೆನಗ್ನ ಪೋಟೋ, ವಿಡಿಯೋ ಹರಿಬಿಟ್ಟ ಸ್ನೇಹಿತ; ದೂರು ದಾಖಲು
ಬಾಲಕ ಮೀನು ಹಿಡಿಯಲು ದಂಡೆಯಲ್ಲಿ ಕಾಯುತ್ತಿದ್ದಾಗ ಮೊಸಳೆಯೊಂದು ಅವರ ಮೇಲೆ ಎರಗಿ ಅವರನ್ನು ನದಿಗೆ ಎಳೆದೊಯ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಅಲ್ಲದೆ ಮೊಸಳೆ ಸಂಜೆಯ ಹೊತ್ತಿಗೆ ಮೃತದೇಹವನ್ನು ಎರಡು ಭಾರಿ ಮೇಲೆ ತಂದು ಮತ್ತೆ ನದಿಯೊಳಗೆ ಎಳೆದೊಯ್ದಿದೆ ಎಂದು ಮಾಧ್ಯಮಗಳು ವರಿದ ಮಾಡಿವೆ.
ಪೊಲೀಸರು, ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಹಾಗೂ ಜಂಗಲ್ ಲಾಡ್ಜ್ ರೆಸಾರ್ಟ್ ಸಿಬ್ಬಂದಿ ಶೋಧ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ಶೋಧ ಕಾರ್ಯಾಚರಣೆಗೆ ನೆರವಾಗಲು ಅಧಿಕಾರಿಗಳು ಸೂಪಾ ಅಣೆಕಟ್ಟಿನಿಂದ ಹೊರಹರಿವು ನಿಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಭಾನುವಾರ ತಡರಾತ್ರಿಯವರೆಗೂ ಶವವನ್ನು ಪತ್ತೆ ಹಚ್ಚಲು ಶೋಧ ತಂಡಕ್ಕೆ ಸಾಧ್ಯವಾಗಲಿಲ್ಲ ಎಂದು DH ವರಿದಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಮರ್ಯಾದಾಗೇಡು ಹತ್ಯೆ: ಯುವತಿ ಎದುರೇ ಆಕೆಯ ಪ್ರೇಮಿಯ ಕೊಲೆ