’40 ವರ್ಷದ ಸಿನಿ ಜರ್ನಿಯಲ್ಲಿ ಇದೊಂದು ದೊಡ್ಡ ಅವಮಾನ’ – ನಟ ಜಗ್ಗೇಶ್
ನಿನ್ನೆ ನಟ ಜಗ್ಗೇಶ್ ದರ್ಶನ್ ಬಗ್ಗೆ ಕೀಳಾಗಿ ಮಾತನಾಡಿದ್ದಾರೆಂದು ದರ್ಶನ್ ಅಭಿಮಾನಿಗಳು ಜಗ್ಗೇಶ್ ಶೂಟಿಂಗ್ ಸೆಟ್ ಗೆ ನುಗ್ಗಿ ಜಗ್ಗೇಶ್ ಅವರ ಕಡೆಯಿಂದ ಕ್ಷಮೆ ಕೇಳಿಸಿದರು. ಈ ಬಗ್ಗೆ ಇಂದು ಜಗ್ಗೇಶ್ ಹೊಸ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ.
40 ವರ್ಷದ ಸಿನಿ ಜರ್ನಿಯಲ್ಲಿ ಇದೊಂದು ದೊಡ್ಡ ಅವಮಾನ ಎಂದು ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ವಿರುದ್ಧ ದರ್ಶನ್ ಅಭಿಮಾನಿಗಳನ್ನು ತಿರುಗಿ ಬೀಳುವಂತೆ ಮಾಡಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಮಾತ್ರವಲ್ಲದೇ ಸ್ಟಾರ್ ವಾರ್ ಕ್ರಿಯೇಟ್ ಮಾಡುತ್ತಿದ್ದಾರೆ. ನಾನು ಆಡಿಯೋದಲ್ಲಿ ವೆಬ್ ಡಿಸೈನರ್ ದರ್ಶನ್ ಬಗ್ಗೆ ಮಾತನಾಡಿದ್ದು. ಇದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರು ಸೇರಿಸಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ನಾನು ಕನ್ನಡ 150 ಸಿನಿಮಾ ಮಾಡಿದ್ದೇನೆ. 29 ಸಿನಿಮಾ ಪ್ರೊಡ್ಯೂಸ್ ಮಾಡಿದ್ದೇನೆ. 2 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಾನೇನು ಅಂತ ಇಡೀ ರಾಜ್ಯಕ್ಕೆ ಗೊತ್ತಿದೆ. ಪರಿಶುದ್ಧವಾಗಿ ಬದುಕಿದ್ದೇನೆ. ತಿನ್ನೋಕೆ ಅನ್ನ ಇಲ್ದೆ ಚಾಪೆ ಮೇಲೆ ಮಲಗಿದ್ದೇನೆ. ಕನ್ನಡಕ್ಕಾಗಿ ಮಾಡುತ್ತಿರುವ ಸೇವೆ ಎಂಥದ್ದು ಎನ್ನುವ ಬಗ್ಗೆ ಇವತ್ತಿನ ವಿಡಿಯೋದಲ್ಲಿ ತೋಡಿಕೊಂಡಿದ್ದಾರೆ. ಯಾವುದೋ ವಿಷಯವನ್ನು ಎಲ್ಲಿಗೂ ಕನೆಕ್ಟ್ ಮಾಡಬೇಡಿ ಎಂದು ಜಗ್ಗೇಶ್ ಮನವಿ ಮಾಡಿಬೇಡಿದ್ದಾರೆ.
ನಾನು ಎಲ್ಲೂ ಓಡೋಗಿಲ್ಲ. ದರ್ಶನ ಅಭಿಮಾನಿಗಳ ಮುಂದೆ ನೇರಾನೇರ ಮಾತನಾಡಿದ್ದೇನೆ ಎಂದು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ಧಾರೆ.ವಿಡಿಯೋದ ಪ್ರತಿಹಂತಕ್ಕೂ ಕೂಡ ಆವರು ಅವರ ಸಿನಿ ಜರ್ನಿಗೆ ಆದ ದೊಡ್ಡ ಅವಮಾನ ಇದು ಎಂದು ಅವರು ವೀಡಿಯೋ ಉದ್ದಕ್ಕೂ ಹೇಳಿದ್ದಾರೆ.
ನಾನೇನು ಅಂಥದನ್ನು ಮಾತನಾಡಿದ್ದೇನೆ ನಾನು? ಇವರೆಲ್ಲಾ ನನ್ನ ಬಗ್ಗೆ ಬಯಲೆಳೆಯೋಕೆ. ತಲೆ ಹಿಡಿದುಕೊಂಡು ಬೆಳೆದವನಲ್ಲ ಅಲ್ಲಾ ನಾನು.ರೌಡಿಸಮ್ ಅಲ್ಲ ಸಿನಿಮಾರಂಗ. ಹುನ್ನಾರ ಮಾಡೋದು ಬೇಡ. ದರಿದ್ರ ರಾಜಕಾರಣ ಕನ್ನಡ ಸಿನಿಮಾ ರಂಗಕ್ಕೆ ಬಂದುಬಿಟ್ಟಿದೆ ಎಂದು ನೊಂದು ವೀಡಿಯೋದಲ್ಲಿ ಮಾತನಾಡಿದ್ದಾರೆ.