‘ಸಾರಿಗೆ ಮುಷ್ಕರ ಹಿಂಪಡೆಯದ್ದಿದ್ದರೆ ಕಠಿಣ ಕ್ರಮ’ – ಸಿಎಂ ಎಚ್ಚರಿಕೆ..!

ರಾಜ್ಯದಲ್ಲಿ ಸಾರಿಗೆ ಸಮರ ಶುರುವಾಗಿ ಇದು ಎರಡನೇ ದಿನ. ಅದಾಗಲೇ ಸರ್ಕಾರಕ್ಕೆ ಭಾರೀ ಬಿಸಿ ತಟ್ಟಿದೆ. ಹೀಗಾಗಿ ಸಿಎಂ ಯಡಿಯೂರಪ್ಪ ಸಾರಿಗೆ ನೌಕರರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಬೆಳಗಾವಿಯಲ್ಲಿ ಇಂದು ಬೆಳಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ” ಮುಷ್ಕರ ಕೈಬಿಡುವಂತೆ ಆಗ್ರಹಿಸಿದ್ದಾರೆ. ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ ಈಗಾಗಲೇ 8 ಬೇಡಿಕೆಗಳನ್ನು ಈಡೇರಿಸಲಾಗಿದೆ. ಹೀಗಿರುವಾಗ ನೌಕರರು ನಮ್ಮ ಮನವಿಗೂ ಸ್ಪಂದಿಸಬೇಕು. ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿ. ಒಂದು ವೇಳೆ ಮುಷ್ಕರ ಕೈಬಿಡದೇ ಇದ್ದರೆ ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಂಡು ಮುಂದೆ ಕಠಿಣ ಕ್ರಮ ಜರುಗಿಸಲಾಗುವುದು” ಎಂದು ಸಿಎಂ ಎಚ್ಚರಿಕೆ ಕೊಟ್ಟಿದ್ದಾರೆ.

ಕಾಂಗ್ರೆಸ್ ನಾಯಕರು ಬಸ್ ನೌಕರರ ಮುಷ್ಕರಕ್ಕೆ ಬೆಂಬಲ ನೀಡಿರುವ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದಾಗ, ಈ ವಿಚಾರವನ್ನು ರಾಜಕೀಯಕ್ಕಾಗಿ ಬಳಸಿಕೊಂಡರೆ ಏನು ಹೇಳಲಿ, ಸಿಬ್ಬಂದಿ ಕೆಲಸಕ್ಕೆ ಹಾಜರಾಗದಿದ್ದರೆ ಕಠಿಣ ಕ್ರಮ ಜರುಗಿಸುತ್ತೇವೆ ಎಂದಷ್ಟೇ ಹೇಳುತ್ತೇನೆ ಎಂದರು.

ಈಗಾಗಲೇ ಸಾರಿಗೆ ನೌಕರರು ಮುಷ್ಕರ ಆರಂಭಿಸುತ್ತಾರೆಂದು ತಿಳಿದಾಗಲೇ ನೌಕರರು ಬೀದಿಗಿಳಿಯದಂತೆ 144 ಸೆಕ್ಸನ್ ಜಾರಿಗೊಳಿಸಾಲಗಿದೆ ಎಂದು ಹೇಳಲಾಯಿತು. ಸಂಬಳ ಕಡಿತಕ್ಕೂ ಸಭೆ ನಡೆಸಲಾಯಿತು. ಕರ್ತವ್ಯಕ್ಕೆ ಹಾಜರಾಗದ ದಿನಗಳಲ್ಲಿ ವೇತನ ಕಡಿತಕ್ಕೂ ಸೂಚಿಸಲಾಯಿತು. ಹೀಗೆ ಸರ್ಕಾರದ ಯಾವುದೇ ಪ್ಲ್ಯಾನಗೂ ಬಗ್ಗದ ನೌಕರರು ಪಟ್ಟು ಬಿಡದೇ ಬೇಡಿಕೆ ಈಡೇರಿಸುವವರೆಗೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಈಗ ಮತ್ತೊಂದು ಅಸ್ತ್ರವನ್ನು ಸರ್ಕಾರ ಬಳಕೆ ಮಾಡಿದ್ದು ಸಾರಿಗೆ ನೌಕರರು ಸಿಎಂ ಎಚ್ಚರಿಕೆಗೆ ಮನವೊಲಿಸುತ್ತಾರಾ ಕಾದು ನೋಡಬೇಕಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights