ಅಪ್ಪು ನೆನಪಿನಲ್ಲಿ ಒಂದುಗೂಡಲಿದೆ ದಕ್ಷಿಣ ಭಾರತೀಯ ಚಿತ್ರರಂಗ; ನ. 16 ರಂದು ‘ಪುನೀತ್‌ ನಮನ’ ಕಾರ್ಯಕ್ರಮ

ಚಂದನವನದ ರಾಜಕುಮಾರ ಪುನೀತ್ ರಾಜ್‌ಕುಮಾರ್ ಅವರ ಹಠಾತ್‌ ಅಗಲಿಕೆಯಿಂದ ಇಡೀ ಚಿತ್ರೋದ್ಯಮವೇ ಶೋಕದಲ್ಲಿದೆ. ಚಿತ್ರರಂಗದ ಕಲಾವಿದರು ನೋವಿನಲ್ಲಿದ್ದಾರೆ. ಪುನೀತ್‌ ಅವರ ನೆನಪಿನಲ್ಲಿ ಅವರೆಲ್ಲರನ್ನೂ ಒಗ್ಗೂಡಿಸಲು ಚಲನಚಿತ್ರ ವಾಣಿಜ್ಯ ಮಂಡಳಿ ಮುಂದಾಗಿದ್ದು, ನವೆಂಬರ್ 16 ರಂದು ‘ಪುನೀತ್ ನಮನ’ ಕಾರ್ಯಕ್ರಮವನ್ನು ಏರ್ಪಡಿಸಿದೆ.

ನವೆಂಬರ್ 16 ರಂದು ಅರಮನೆ ಮೈದಾನದಲ್ಲಿ ‘ಪುನೀತ್ ನಮನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಪುನೀತ್ ಗೀತ ನಮನ ಸಹ ಇರಲಿದೆ. ನಾಗೇಂದ್ರ ಪ್ರಸಾದ್ ಅಪ್ಪು ಬಗ್ಗೆ ಬರೆದಿರುವ ಹಾಡೊಂದರ ಪ್ರಸ್ತುತಿ ಮೂಲಕ ಗೀತ ನಮನ ಆರಂಭವಾಗಲಿದ್ದು, ಪುನೀತ್ ರಾಜ್‌ಕುಮಾರ್ ನಟನೆಯ ಹಾಡುಗಳನ್ನು ವಿವಿಧ ಹೆಸರಾಂತ ಗಾಯಕರು ಹಾಡಲಿದ್ದಾರೆ ಎಂದು ಸಾ.ರಾ.ಗೋವಿಂದು ತಿಳಿಸಿದ್ದಾರೆ.

ಕನ್ನಡ ಚಿತ್ರರಂಗದವರು ಮಾತ್ರವಲ್ಲದೆ ನೆರೆ-ಹೊರೆಯ ಚಿತ್ರರಂಗದ ಸ್ಟಾರ್‌ ನಟ-ನಟಿಯರೂ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಪುನೀತ್‌ಗೆ ಆಪ್ತರಾಗಿದ್ದವರನ್ನೂ ಕೂಡ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತೇವೆ” ಅವರು ಹೇಳಿದ್ದಾರೆ.

ರಾಜ್‌ಕುಮಾರ್ ಕುಟುಂಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ.

ಇದನ್ನೂ ಓದಿ: ಕನ್ನಡ ಸ್ಟಾರ್‌ಗಳ ‘ಫ್ಯಾನ್ಸ್‌ ವಾರ್‌’ಗೆ ಫುಲ್‌ಸ್ಟಾಪ್; ಯುನೈಟ್ ಕೆಎಫ್‌ಐ ಅಭಿಯಾನ!

ಅಪ್ಪು ಅವರ ನೆನಪಿನಲ್ಲಿ ಈಗಾಗಲೇ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ. ನಟಿ ಪ್ರಣಿತಾ ಸುಭಾಶ್ ಅವರು ಇತ್ತೀಚೆಗೆ ಪುನೀತ್ ನೆನಪಿನಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಿದ್ದರು. ಪುನೀತ್ ಅವರ ಹಲವು ಅಭಿಮಾನಿ ಸಂಘಗಳು ಅಪ್ಪು ನೆನಪಿಗೆ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿವೆ.

ಇದೀಗ ಚಿತ್ರರಂಗವು ದೊಡ್ಡದಾಗಿ ಅಪ್ಪುವಿಗೆ ನಮನ ಸಲ್ಲಿಸಲು ಮುಂದಾಗಿದೆ.

ಇದನ್ನೂ ಓದಿ: ಅಭಿಮಾನಿಗಳಿಗೆ ಅಪ್ಪು ಸ್ಪೂರ್ತಿ; ನೇತ್ರದಾನ ಮಾಡಲು ಅಭಿಮಾನಿಗಳ ಸರತಿ ಸಾಲು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights