ಬಿಗ್ ಬಾಸ್ ಮನೆಯಿಂದ ಹೊರಬಂದ ಶಂಕರ್ : ಕಾರಣ ಏನಿರಬಹುದು?
ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯವರು ಕೆಟ್ಟವರಾಗುತ್ತಿದ್ದಾರೆ, ಕೆಟ್ಟವರು ಒಳ್ಳೆಯವರಾಗುತ್ತಿದ್ದಾರೆ. ಇದಕ್ಕೆ ಒಳ್ಳೆಯ ಉದಾಹರಣೆ ಅಂದರೆ ಶಂಕರ್ ಅಶ್ವಥ್. ಹೀಗಾಗಿನೇ ಈ ವಾರ ಬಿಗ್ ಬಾಸ್ ಮನೆಯಿಂದ ಹೊರನಡೆದಿದ್ದಾರೆ.
ಹೌದು… ಬಿಗ್ ಬಾಸ್ ಮನೆಯ 3ನೇ ಸ್ಪರ್ಧಿಯಾಗಿ ಹಿರಿಯ ನಟ ಶಂಕರ್ ಅಶ್ವಥ್ ಎಂಟ್ರಿ ಕೊಟ್ಟಿದ್ದರು. ಆರಂಭದಲ್ಲಿ ಶಂಕರ್ ಅವರಿಗೆ ಬಿಗ್ ಬಾಸ್ ಮನೆಯ ಎಲ್ಲಾ ಸ್ಪರ್ಧಿಗಳಿಂದ ಉನ್ನತ ಸ್ಥಾನದಲ್ಲಿ ಗೌರವವಿತ್ತು. ಆದ್ರೆ ಅದ್ಯಾಕೋ ದಿನಗಳೆದಂತೆ ಕಡಿಮೆ ಆಯ್ತು ಅನ್ಸುತ್ತೆ. ಯಾಕಂದ್ರೆ ಅವರ ವಯಸ್ಸಿಗೆ ಮೀರಿ ಆಟಗಳಲ್ಲಿ ಸ್ಪರ್ಧಿಸಿ ಮನೆಯ ಎಲ್ಲಾ ಸ್ಪರ್ಧಿಗಳ ಮೆಚ್ಚುಗೆ ಪಡೆದಿದ್ದ ಶಂಕರ್ ಅವರು ಕೆಲ ಬಾರಿ ಎಲ್ಲರಂತೆ ಆಟದಲ್ಲಿ ಸ್ಪರ್ಧಿಸಲು ಅಸಾಧ್ಯರು ಎನ್ನುವ ಹೇಳಿಕೆಗಳಿಗೂ ನಾಮಿನೇಟ್ ಆಗುತ್ತಿದ್ದರು.
ಮನೆಯ ಸದಸ್ಯರನ್ನು ಎರಡು ಗುಂಪುಗಳಾಗಿ ಬೇರ್ಪಡಿಸಿ ಬಿಗ್ ಬಾಸ್ ಟಾಸ್ಕ್ ಗಳನ್ನು ನೀಡುತ್ತಿದ್ದಾರೆ. ಈ ವಾರ ನಡೆದ ಟಾಸ್ಕ್ ನಲ್ಲಿ ಶಂಕರ್ ನಡೆದುಕೊಂಡ ರೀತಿ ಮನೆಯ ಯಾವ ಸ್ಪರ್ಧಿಗಳಿಗೂ ಇಷ್ಟವಾಗಲಿಲ್ಲ. ಹೌದು… ಮನೆಯ ಸದಸ್ಯರಾದ ವೈಷ್ಣವಿ ಗೌಡ ಹಾಗೂ ದಿವ್ಯ ಸುರೇಶ್ ಅವರಿಗೆ ನೀಡಿದ ಟಾಸ್ಕ್ ನಲ್ಲಿ ಈಜುಕೊಳದ ಮಧ್ಯೆದಲ್ಲಿ ನೀರಿಗೆ ಇಳಿಯದಂತೆ ಕುಳಿತುಕೊಳ್ಳಬೇಕಿತ್ತು. ರಾತ್ರಿಯಿಂದಲೂ ಊಟ ನಿದ್ದೆ ಇಲ್ದೆ ದಿವ್ಯ ಹಾಗೂ ವೈಷ್ಣವಿ ಈಜುಕೊಳದ ಮಧ್ಯೆ ಹಾಕಿದ ಕಲ್ಲಿನ ಮೇಲೆ ಕುಳಿತೇ ಇದ್ದರು. ಇವರಿಬ್ಬರನ್ನು ನೀರಿಗೆ ಇಳಿಯದೇ ವಿರೋಧಿ ತಂಡಗಳು ನೀರಿಗೆ ಬೀಳಿಸಬೇಕು. ಯಾವ ಪ್ರಯತ್ನಗಳನ್ನು ಮಾಡಿದರೂ ವೈಷ್ಣವಿ ಹಾಗೂ ದಿವ್ಯಳನ್ನು ನೀರಿಗೆ ಇಳಿಸಲು ಸಾಧ್ಯವಾಗಲೇ ಇಲ್ಲ.
ಈ ವೇಳೆ ಏಕಾಏಕಿ ನೀರಿಗೆ ಧುಮಿಕಿದ ಶಂಕರ್ ಅವರು ವೈಷ್ಣವಿಯನ್ನು ನೀರಿಗೆ ತಳ್ಳಿದರು. ಶಂಕರ್ ಅವರು ಬಿಗ್ ಬಾಸ್ ನಿಯಮವನ್ನು ಮೀರಿದ್ದು ಅಲ್ದೆ ವೈಷ್ಣವಿ ಅವರನ್ನು ಪಟ್ಟ ಶ್ರಮವನ್ನು ವ್ಯರ್ಥ ಮಾಡಿದ್ದು ಮನೆಯ ಎಲ್ಲಾ ಸದಸ್ಯರ ಕೆಂಗಣ್ಣಿಗೆ ಗುರಿಯಾಯ್ತು. ಕಷ್ಟಪಟ್ಟ ವೈಷ್ಣವಿಗಾಗಿ ಕಣ್ಣೀರು ಹಾಕಿದ ಸ್ಪರ್ಧಿಗಳು, ಶಂಕರ್ ಅವರ ನಡೆ ವಿರುದ್ಧ ಕೆಂಡ ಕಾರಿದ್ರು. ಹೀಗಾಗಿನೇ ಏನೋ ಈ ವಾರ ಬಿಗ್ ಬಾಸ್ ಮನೆಯಿಂದ ಶಂಕರ್ ಹೊರನಡೆದಿದ್ದಾರೆ.