ಸಾಹುಕಾರ್ ಸಿಡಿ ಕೇಸ್ : ಮಾಸ್ಟರ್ ಕಾಪಿ ಸಿಕ್ಕಿದ್ದರಿಂದ ಹೊರಬರುತ್ತಾ ಸ್ಪೋಟಕ ಸತ್ಯ..?

ರಾಜ್ಯವನ್ನೇ ತಲ್ಲಣಗೊಳಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಗೆ ಟ್ವಿಸ್ಟ್ ಸಿಕ್ಕಿದೆ. ಸಿಡಿ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಎಸ್ಐಟಿಗೆ ಮಹತ್ವದ ವಿಚಾರಗಳು ಲಭ್ಯವಾಗುತ್ತಿದ್ದು ಸದ್ಯದಲ್ಲೇ ಸಿಡಿ ಸೂತ್ರಧಾರಿ ಮತ್ತು ಪಾತ್ರಧಾರಿ ಬಹಿರಂಗವಾಗುವ ಸಾಧ್ಯತೆ ಇದೆ.

ಹೌದು… ರಮೇಶ್ ಸಿಡಿ ಕೇಸ್ ಕೈಗೆತ್ತುಕೊಂಡ ಎಸ್ಐಟಿಗೆ 2 ಗಂಟೆ 20 ನಿಮಿಷದ ಮಾಸ್ಟರ್ ಕಾಪಿ ಸಿಕ್ಕಿದೆ ಎನ್ನಲಾಗುತ್ತಿದೆ. ಈ ಮಾಸ್ಟರ್ ಕಾಪಿಯನ್ನು ಆಧರಿಸಿ ಎಸ್ಐಟಿ ತನಿಖೆ ನಡೆಸುತ್ತಿದೆ.

ಇದರಲ್ಲಿ ಯುವತಿ ಪಾತ್ರವೇನು? ರಮೇಶ್ ಪಾತ್ರವೇನು? ಸೂತ್ರಧಾರಿಗಳ ಪಾತ್ರವೇನು..? ಹೀಗೆ ಕೆಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಹೀಗಾಗಿ ಅಸಲಿ ಫೂಟೇಜ್ ನಿಂದ ಎಸ್ಐಟಿ ತನಿಖಾ ಧಿಕ್ಕು ಬದಲಾಗಿದೆ.

ಈ ಹಿಂದೆ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದ ರಮೇಶ್ ಜಾರಕಿಹೊಳಿ ಕೆಲ ಅನುಮಾನಗಳಿಗೆ ಉತ್ತರ ಕೊಟ್ಟಿದ್ದರು. ‘ಯುವತಿಗೂ ತಮಗೂ ಯಾವುದೇ ಸಂಬಂಧವಿಲ್ಲ. ಆಕೆ ಯಾರು ಎಂದು ನನಗೆ ಗೊತ್ತಿಲ್ಲ’ ಎಂದು ಬಹಿರಂಗವಾಗಿ ಹೇಳಿದ್ದರು. ಇದೇ ಹೇಳಿಕೆಯನ್ನು ರಮೇಶ್ ಎಸ್ಐಟಿ ಮುಂದೆ ಪ್ರಸ್ತಾಪಿಸಿದ್ರು. ಆದರೆ ಯುವತಿ ಫೋನ್ ಕಾಲ್ ಲಿಸ್ಟ್ ನ್ನು ಎಸ್ಐಟಿ ರಮೇಶ್ ಮುಂದೆ ಇರಿಸಿದಾಗ ತಮ್ಮ ನಂಬರ್ ನೋಡಿದ ಜಾರಕಿಹೊಳಿ ತಾವು ತಮ್ಮ ವಕೀಲರ ಅನುಮತಿ ಪಡೆದು ಈ ಬಗ್ಗೆ ಉತ್ತರಿಸುತ್ತೇನೆ ಎಂದು ಗೋಡೆ ಮೇಲೆ ದೀಪ ಇಟ್ಟಿದ್ದರು. ರಮೇಶ್ ಈ ನಡೆ ಎಸ್ಐಟಿ ಗೆ ಕೆಲವೊಂದು ಅನುಮಾನಗಳಿಗೆ ಉತ್ತರ ನೀಡಿತ್ತು. ಇದರ ಜಾಡು ಹಿಡಿದು ಹೊರಟ ಎಸ್ಐಟಿಗೆ ಸದ್ಯ 2 ಗಂಟೆ 20 ನಿಮಿಷದ ಮಾಸ್ಟರ್ ಕಾಪಿ ಸಿಕ್ಕಿದೆ ಎನ್ನಲಾಗುತ್ತಿದೆ.

ಇದರಿಂದ ಎಸ್ಐಟಿ ತನಿಖಾ ಧಿಕ್ಕೆ ಬದಲಾಗಿದೆ. ಸಿಡಿಯ ಹಿಂದಿನ ರಹಸ್ಯ ಕಥೆ ಏನು..? ಜೊತೆಗೆ ಸದ್ಯದ್ರಲ್ಲೆ ವೈರಲ್ ದೃಶ್ಯದ ಅಸಲಿಯತ್ತೇನು? ಸಿಡಿ ಸೂತ್ರಧಾರಿಗಳು ಯಾರು? ಪಾತ್ರಧಾರಿಗಳು ಯಾರು? ಎನ್ನುವ ಸತ್ಯ ಗೊತ್ತಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights