ಸಾಕು ನಾಯಿಗಳನ್ನು ನೋಡಿಕೊಳ್ಳಲು ನಿರಾಕರಿಸಿದ ಸಹೋದರಿಗೆ ಗುಂಡು ಹಾರಿಸಿದ ಸಹೋದರ!

ಸಾಕು ನಾಯಿಗಳನ್ನು ನೋಡಿಕೊಳ್ಳಲು ನಿರಾಕರಿಸಿದ 23 ವರ್ಷದ ಸಹೋದರಿಗೆ ಸಹೋದರ ಗುಂಡು ಹಾರಿಸಿದ ಘಟನೆ ಯುಪಿ ಮೀರತ್‌ನಲ್ಲಿ ನಡೆದಿದೆ.

ಮೀರತ್‌ನ 25 ವರ್ಷದ ಆರೋಪಿ ಆಶಿಶ್ ನನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.ಈ ಬಗ್ಗೆ ಮಾತನಾಡಿದ ಪೊಲೀಸ್ ಅಧೀಕ್ಷಕ ದೇಹತ್ ಕೇಶವ್ ಕುಮಾರ್, “ಭವನಪುರ ಪ್ರದೇಶದಲ್ಲಿ ವಾಸಿಸುವ ಆಶಿಶ್ ಎಂಬ 25 ವರ್ಷದ ವ್ಯಕ್ತಿ ತನ್ನ 23 ವರ್ಷದ ಸಹೋದರಿ ಪಾರುಲ್ನನ್ನು ಕೊಂದಿದ್ದಾನೆ. ತನ್ನ 18-20 ಸಾಕು ನಾಯಿಗಳನ್ನು ನೋಡಿಕೊಳ್ಳಲು ನಿರಾಕರಿಸಿದ ಕಾರಣ ಆರೋಪಿ ತನ್ನ ಸಹೋದರಿಯನ್ನು ಕೊಂದಿದ್ದಾನೆ” ಎಂದು ಹೇಳಿದ್ದಾರೆ.

ಪ್ರತಿದಿನ ಆರೋಪಿ ತನ್ನ 20ಕ್ಕೂ ಹೆಚ್ಚು ಸಾಕು ನಾಯಿಗಳಿಗೆ ಆಹಾರ ತಯಾರಿಸಲು ತನ್ನ ಸಹೋದರಿಗೆ ಹೇಳುತ್ತಿದ್ದನು. ಇಂದು ಅವಳು ನಿರಾಕರಿಸಿದಾಗ ಅವನು ಅವಳನ್ನು ಗುಂಡಿಕ್ಕಿ ಕೊಂದಿದ್ದಾನೆ.

ತನ್ನ ಸಹೋದರಿಗೆ ಎರಡು ಬಾರಿ ಗುಂಡು ಹಾರಿಸಿದ ನಂತರ ಆಶಿಶ್ ಸ್ವತಃ ಪೊಲೀಸರನ್ನು ಕರೆದಿದ್ದಾನೆ ಎಂದು ನೆರೆಹೊರೆಯವರೊಬ್ಬರು ಬಹಿರಂಗಪಡಿಸಿದ್ದಾರೆ. ಆರೋಪಿ ತಂಗಿಗೆ ತಲೆಗೆ ಒಂದು ಗುಂಡು ಮತ್ತು ಹೃದಯ ಭಾಗಕ್ಕೆ ಒಂದು ಗುಂಡು ಹಾರಿಸಿದ್ದಾನೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights