ಕೊರೊನಾ ವರದಿ ಇಲ್ಲದ ಕಾರಣಕ್ಕೆ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸದ ಸಿಬ್ಬಂದಿ : ಮಗು ಸಾವು!

ಕೊರೊನಾ ವರದಿ ಇಲ್ಲದ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸದ ಗರ್ಭಿಣಿ ವಾರ್ಡ್ ಎದುರು ನರಳಾಡಿ ಮಗು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ.

ಹೆರಿಗೆ ನೋವು ಹಿನ್ನೆಲೆ ಮಂಡ್ಯ ಜಿಲ್ಲಾಸ್ಪತ್ರೆಗೆ ಬಂದಿದ್ದ ಗರ್ಭಿಣಿ ಮಹಳೆ ಸೋನುಗೆ ಬೆಡ್ ಸಿಗಲಿಲ್ಲ. ಕೋವಿಡ್ ಟೆಸ್ಟ್ ವರದಿ ಇಲ್ಲದ ಹಿನ್ನೆಲೆ ಸಿಬ್ಬಂದಿ ಆಸ್ಪತ್ರಗೆ ದಾಖಲಿಸಿಕೊಳ್ಳಲಿಲ್ಲ. ಹೀಗಾಗಿ 2 ಗಂಟೆಗಳ ಕಾಲ ಆಸ್ಪತ್ರೆಯ ವಾರ್ಡ್ ಮುಂದೆಯೇ ಗರ್ಭಿಣಿ ನರಳಾಡಿದ್ದಾಳೆ. ನಂತರ ವಾಮಂಡ್ಯ ಜಿಲ್ಲಾಸ್ಪತ್ರೆಯ ವಾರ್ಡ್ ಮುಂದೆಯೇ ಗರ್ಭಿಣಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದು ಮಗು ಸಾವನ್ನಪ್ಪಿದೆ.

ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಕುಟುಂಬಸ್ಥರಿಂದ ಆಕ್ರೋಶಗೊಂಡಿದ್ದಾರೆ.

ಕೊರೊನಾದ ಕರಾಳದಿನಗಳಲ್ಲಿ ನಡೆದ ಹೃದಯ ವಿದ್ರಾವಕ ಘಟನೆಗಳಲ್ಲಿ ಇದು ಒಂದು. ಆಸ್ಪತ್ರೆಯ ಸಿಬ್ಬಂದಿಗಳು ಕೊಂಚ ಕನಿಕರವೂ ಇಲ್ಲದೇ ವರ್ತಿಸುತ್ತಿರುವುದು ಇದು ಮೊದಲಲ್ಲ. ಹಲವಾರು ಬಾರಿ ಆಸ್ಪತ್ರೆಗಳು ಮನುಷ್ಯತ್ವವಿಲ್ಲದೆ ನಡೆದುಕೊಂಡಿರುವ ಪ್ರಕರಣಗಳು ಸಾಕಷ್ಟಿವೆ. ಮೊನ್ನೆಯಷ್ಟೇ ಹಾಸನದ ಶಾಂತಿಗ್ರಾಮ ಆಸ್ಪತ್ರೆಯ ಮುಂದೆ ತುಂಬು ಗರ್ಭಿಣಿ ನರಳಾಡಿದ ಪ್ರಕರಣ ಇನ್ನೂ ಮಾಸಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights