ಸಾಹುಕಾರ ಸಿಡಿ ಪ್ರಕರಣ : ಬೀಗ- ಬೀಗತಿ ಮೇಲೆ ಬಿಜೆಪಿ ಕಣ್ಣು…!

ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆಯಾಗುತ್ತಿದ್ದಂತೆ ರಾಜಕೀಯ ಕೆಸರೆರೆಚಾಟ ಶುರುವಾಗಿದೆ. ಸಿಡಿ ಬಿಡುಗಡೆಯ ಹಿಂದಿರುವ ಮಹಾನಾಯಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಂದು ಹೇಳಲಾಗುತ್ತಿದೆ.

ಹೌದು… ಸಿಡಿ ಬಿಡುಗಡೆ ಮಾಡಿದ್ದು ಯಾರು ಎಂಬ ವಿಚಾರ ಇನ್ನೂ ತನಿಖೆ ಹಂಚತದಲ್ಲಿದೆ. ಆದಾಗಲೇ ಮಹಾನಾಯಕ ಇವನೇ ಎನ್ನುವತ್ತಿದೆ ಬಿಜೆಪಿ. ಜೊತೆಗೆ ಸಿಡಿ ಹಿಂದೆ ಕೇವಲ ಮಹಾನಾಯಕನ ಕೈವಾಡವಿಲ್ಲ ಮಹಾನಾಯಕಿಯ ಕೈವಾಡವೂ ಇದೆ ಎಂದು ಆರೋಪಿಸಲಾಗುತ್ತಿದೆ.

ಸಿಡಿ ಪ್ರಕರಣದಲ್ಲಿ ಮಹಾನಾಯಕಿ ಶಾಸಕಿ ಲಕ್ಷ್ಮೀಹೆಬ್ಬಾಳ್ಕ್ ಆದರೆ ಮಹಾನಾಯಕ ಕನಕಪುರ ಬಂಡೆ ಡಿಕೆ ಶಿವಕುಮಾರ್ ಎಂದು ದೂರಲಾಗುತ್ತಿದೆ. ಈ ಮೂಲಕ ಬಿಜೆಪಿ ಬೀಗ್- ಬೀಗತಿ ಇಬ್ಬರನ್ನು ಟಾರ್ಗೇಟ್ ಮಾಡಿದೆ.

ಮೈತ್ರಿ ಸರ್ಕಾರ ಬೀಳಲು ಕಾರಣರು ಎನ್ನಲಾಗಿದ್ದ ರಮೇಶ್ ಮೇಲೆ ಡಿಕೆ ಶಿವಕುಮಾರ್ ಕಣ್ಣು ಬಿದ್ದಿತ್ತ ಎನ್ನಲಾಗುತ್ತಿದೆ. ಜೊತೆಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ ಮತ್ತು ರಮೇಶ್ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಸದ್ಯ ಇವರಿಬ್ಬರೇ ಸಿಡಿ ಹಿಂದಿರುವ ಮಹಾನಾಯಕ ಮತ್ತು ನಾಯಕಿ ಎಂದು ಹೇಳಲಾಗುತ್ತಿದೆ.

ಇತ್ತೀಚಿಗೆ ಕಾಂಗ್ರೆಸ್ ನಡೆಸಿದ ಶಿವಮೊಗ್ಗ ಚಲೋ ಜಾಥಾದ ಹಿಂದೆ ಕೆಪಿಸಿಸಿಯ ಅಘೋಷಿತ ಅಧ್ಯಕ್ಷೆ, ಮಹಾನಾಯಕಿಯ ಕೈವಾಡವಿದೆ ಎಂದು ಬಿಜೆಪಿ ಟ್ವಿಟರ್ ಖಾತೆಯಲ್ಲಿ ಹೇಳಿದೆ. ಮಹಾನಾಯಕರೊಬ್ಬರು ಅಘೋಷಿತ ಅಧ್ಯಕ್ಷೆಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಬಿಜೆಪಿ ಕರ್ನಾಟಕ ಟ್ವಿಟರ್ ಖಾತೆಯಲ್ಲಿ ಟೀಕಿಸಲಾಗಿದೆ.

ಬೀಗ- ಬೀಗತಿ ಸಂಬಂಧಕ್ಕಾಗಿ ಶಿವಮೊಗ್ಗ ಚಲೋ ಮಾಡಿದ ಕಾಂಗ್ರೆಸ್ ಜನತೆಗೆ ತಪ್ಪು ಮಾಹಿತಿ ನೀಡಿ, ಸದನದ ಸಮಯ ವ್ಯರ್ಥ ಮಾಡಿತ್ತು ಎಂದು ಆರೋಪಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights