‘ರಮೇಶ್ ಜಾರಕಿಹೊಳಿ ಸಿಡಿ ಸಂತ್ರಸ್ತೆ ಉಲ್ಟಾ ಹೊಡೆದಿಲ್ಲ’ – ಯುವತಿ ಪರ ವಕೀಲ ಸೂರ್ಯ ಮುಕುಂದರಾಜ್ ಸ್ಪಷ್ಟನೆ!
‘ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಸಂಬಂಧಿಸಿದಂತೆ ಯಾರೂ ಕೂಡ ಊಹಿಸಲಾಗದಂತ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಂದು 41ನೇ ದಿನಕ್ಕೆ ಮೇಜರ್ ಟ್ವಿಸ್ಟ್ ಪಡೆದುಕೊಂಡಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಸಂತ್ರಸ್ತೆ ಇಂದು ಉಲ್ಟಾ ಹೊಡೆದಿದ್ದಾರೆ ಎನ್ನುವ ಹೇಳಿಕೆ ಸುಳ್ಳು’ ಎಂದು ಯುವತಿ ಪರ ವಕೀಲ ಸೂರ್ಯ ಮುಕುಂದರಾಜ್ ಸ್ಪಷ್ಟಪಡಿಸಿದ್ದಾರೆ.
ಹೌದು… ಇಂದು ನೋಟೀಸ್ ನೀಡದೇ ಎಸ್ಐಟಿ ಮುಂದೆ ಹಾಜರಾದ ಯುವತಿಯ ನಡೆ ತೀವ್ರ ಕುತೂಹಲ ಹುಟ್ಟಿಸಿತ್ತು. ರಮೇಶ್ ಜಾರಕಿಹೊಳಿ ಸಿಡಿ ವಿಚಾರದಲ್ಲಿ ನನಗೆ ಅನ್ಯಾಯ ಆಗಿದ್ದು ನಿಜ. ಹೀಗಾಗಿ ಮತ್ತೆ ಹೇಳಿಕೆ ನೀಡಲು ಅವಕಾಶ ಕೊಡುವಂತೆ ಯುವತಿ ಮನವಿಗೆ ಮುಂದಾಗಿದ್ದಾಳೆ. ಕೆಲ ವಿಚಾರಗಳನ್ನು ಸೇರಿಸಲು ಯುವತಿ ಮರು ಮನವಿ ಮಾಡಿದ್ದಾಳೆ. ಹೀಗಾಗಿ ಯುವತಿ ಯೂ ಟರ್ನ್ ಹೊಡೆದಿಲ್ಲ. ಇದು ಸುಳ್ಳು ಸುದ್ದಿ ಎಂದು ವಕೀಲರು ಹೇಳಿದ್ದಾರೆ.
“ನನ್ನಂದ ಬಲವಂತವಾಗಿ ಹೇಳಿಕೆ ಕೊಡಿಸಿದ್ರು. ಈ ಕೇಸ್ ಈ ಮಟ್ಟಿಗೆ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ. ನನ್ನ ಮರ್ಯಾದೆ ಹಾಳಾಗಿದೆ. ಇಷ್ಟರ ಮಟ್ಟಿಗೆ ಹಾಳಾಗುತ್ತೆ ಅಂದುಕೊಂಡಿರಲಿಲ್ಲ. ನಾನು ನಂಬಿದರೇ ನನಗೆ ಮೋಸ ಮಾಡಿದ್ದಾರೆ ಎಂದು ಸಿಡಿ ಯುವತಿ ಹೇಳಿಕೊಂಡಿದ್ದಾಳೆ. ಜೊತೆಗೆ ಕಿಂಗ್ ಪಿನ್ ಗಳ ವಿರುದ್ಧವೇ ಯುವತಿ ಆರೋಪ ಮಾಡಿದ್ದಾಳೆ. ಒಟ್ಟಿನಲ್ಲಿ ನನಗೆ ಅನ್ಯಾಯ ಆಗಿದೆ. ಹೀಗಾಗಿ ಮರು ಹೇಳಿಕೆಗೆ ಅವಕಾಶ ನೀಡಿ ಎಂದು ಯುವತಿ ನ್ಯಾಯಾಧೀಶರ ಮುಂದೆ ಮನವಿ ಮಾಡಿಕೊಂಡಿದ್ದಾಳೆ” ಎನ್ನುವ ಸುಳ್ಳು ಸುದ್ದಿಗಳಿಗೆ ವಕೀಲರು ಸ್ಪಷ್ಟನೆ ನೀಡಿದ್ದಾರೆ.
ಜೊತೆಗೆ ಯುವತಿ ಪರ ವಕೀಲರಾದ ಜಗದೀಶ್ ಕೂಡ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಯುವತಿ ತದ್ವಿರುದ್ಧ ಹೇಳಿಕೆ ಕೊಟ್ಟಿಲ್ಲ. ಇದು ಸುಳ್ಳು ಸುದ್ದಿ ಎಂದು ಜಗದೀಶ್ ಸ್ಪಷ್ಟನೆ ಕೊಟ್ಟಿದ್ದಾರೆ.
ಯುವತಿ ಸೆಕ್ಷನ್ 164 ಅಡಿಯಲ್ಲಿ ಯುವತಿ ಮರು ಹೇಳಿಕೆ ನೀಡಲು ಮನವಿ ಮಾಡಿದ್ದು ಜಿನ. ಆದರೆ ಅದರಲ್ಲಿ ಇನ್ನಷ್ಟು ಹೇಳಿಕೆಗಳನ್ನು ಸೇರಿಸಲು ವಿನ: ತದ್ವಿರುದ್ಧ ಹೇಳಿಕೆ ನೀಡಲು ಅಲ್ಲ ಎಂದಿದ್ದಾರೆ.