ರೈತ ಪ್ರತಿಭಟನೆ ತಿಳಿದಿದ್ದರೆ ಮೊದಲೇ ಧಾವಿಸುತ್ತಿದ್ದೆ: ರಾಜ್ನಾಥ್ ಸಿಂಗ್ ಹಳೇ ವಿಡಿಯೋ ವೈರಲ್
ರೈತರು ಧರಣಿ ಕೂತ್ತಿದ್ದಾರೆಂದು ನನಗೆ ಗೊತ್ತಾಗಿದ್ದರೆ ನಾನು ಮೊದಲೇ ಆಗಮಿಸುತ್ತಿದ್ದೆ ಎಂದು ಬಿಜೆಪಿ ಹಿರಿಯ ನಾಯಕ ರಾಜ್ ನಾಥ್ ಸಿಂಗ್ 2013ರಲ್ಲಿ ಮಾಡಿರುವ ಭಾಷಣದ ವೀಡಿಯೊ ಈಗ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಈ ವೀಡಿಯೊದೊಂದಿಗೆ ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ.
ಕೇಂದ್ರ ಸರಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಮಸೂದೆಗಳಿಗೆ ವಿರೋಧ ವ್ಯಕ್ತಪಡಿಸಿ ಪಂಜಾಬ್, ಹರ್ಯಾಣ ಸೇರಿದಂತೆ ಹಲವು ರಾಜ್ಯಗಳ ರೈತರು ದಿಲ್ಲಿಯಲ್ಲಿ ಆಂದೋಲನ ನಡೆಸುತ್ತಿದ್ದು, ಕೇಂದ್ರ ಸರಕಾರದ ಯಾವೊಬ್ಬ ಸಚಿವನೂ ರೈತರನ್ನು ಭೇಟಿಯಾಗಿಲ್ಲ. ಅದರ ಬದಲಾಗಿ ರೈತರೊಂದಿಗೆ ಮಾತುಕತೆ ನಡೆಸಲು ಸಿದ್ದ ಎಂಬ ಹೇಳಿಕೆಯನ್ನು ನೀಡುವುದರಲ್ಲೇ ಮಗ್ನರಾಗಿದ್ದಾರೆ.
“मुझे पता होता कि किसान धरने पर बैठे हैं तो मैं पहले ही आ जाता। संगठन नहीं, हमारी नज़र बस ये देखती है कि आंदोलन पर देश का किसान बैठा है”
BJP आज सत्ता में है तो जुमलेबाज़ी की वजह से नहीं बल्कि ज़मीनी मुद्दे उठाने की वजह से। अब @rajnathsingh जी का 2013 का ये बयान ही सुन लीजिए। pic.twitter.com/sBxyCMHQKU
— Umashankar Singh उमाशंकर सिंह (@umashankarsingh) November 28, 2020