ಇಂದೇ ಖಾತೆ ಹಂಚಿಕೆ ಸಾಧ್ಯತೆ : ಪ್ರಮುಖ ಖಾತೆಗಳಿಗೆ ಸಚಿವರ ಪಟ್ಟು..!
ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟ ಸೇರಿದ 29 ನೂತನ ಸಚಿವರಿಗೆ ಇಂದೇ ಖಾತೆ ಹಂಚಿಕೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ಈ ಹಿಂದೆ ಮಾಧ್ಯಮದ ಮುಂದೆ ಮಾತನಾಡು ಸಿಎಂ ಬೊಮ್ಮಾಯಿ ಆಗಸ್ಟ್ 6 ಕ್ಕೆ ಸಚಿವರಿಗೆ ಖಾತೆ ಹಂಚಿಕೆ ಮಾಡುವುದಾಗಿ ಹೇಳಿದ್ದರು.
ಹೀಗಾಗಿ ನೂತನ ಸಚಿವರು ಪ್ರಮುಖ ಖಾತೆಗಾಗಿ ಪಟ್ಟು ಹಿಡಿದಿದ್ದು ಮುಖ್ಯಮಂತ್ರಿಗಳಿಗೆ ಖಾತೆ ಖ್ಯಾತೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವರಿಷ್ಠರು ಹಾಗೂ ಬಿಜೆಪಿ ನಾಯಕರ ಮಾರ್ಗದರ್ಶನದಲ್ಲಿ ಮತ್ತು ಸಚಿವರ ಸಾಮಾರ್ಥ್ಯಕ್ಕನುಗುಣವಾಗಿ ಖಾತೆ ಹಂಚಿಕೆ ಮಾಡಲು ಸಿಎಂ ತೀರ್ಮಾನಿಸಿದ್ದಾರೆನ್ನಲಾಗುತ್ತಿದೆ. ಸಚಿವ ಸಂಪುಟ ರಚನೆ ವೇಳೆಯೂ ಬೊಮ್ಮಾಯಿ ಸಾಕಷ್ಟು ಅಳೆದು ತೂಗಿ ಹೈಕಮಾಂಡ್ ಹಾಗೂ ಹಿರಿಯ ನಾಯಕರ ಮಾರ್ಗದರ್ಶನ ಪಡೆದು ಸಚಿವರನ್ನು ಆಯ್ಕೆ ಮಾಡಿದ್ದರೂ. ಈಗಲೂ ಕೂಡ ಅದೇ ಮಾರ್ಗವನ್ನು ಅನುಸರಿಸಲಿದ್ದಾರೆನ್ನಲಾಗುತ್ತಿದೆ. ಹೀಗಾಗಿ ನೂತನ ಸಚಿವರ ಚಿತ್ತ ದೆಹಲಿಯತ್ತ ನೆಟ್ಟಿದೆ.
ಇದರ ಮದ್ಯೆ ಯಾರ್ಯಾರಿಗೆ ಯಾವ ಖಾತೆ ನೀಡಲಾಗುತ್ತದೆ ಅನ್ನೋ ಕುತೂಹಲವೂ ಕೂಡ ಇದೆ. ಒಂದು ವೇಳೆ ಖಾತೆ ಹಂಚಿಕೆಯಲ್ಲಿ ನಿರೀಕ್ಷೆಯಂತೆ ಖಾತೆ ಕೈಗೆಟಕದೇ ಹೋದಲ್ಲಿ ಸಚಿವರು ಅಸಮಧಾನಗೊಳ್ಳು ಸಾಧ್ಯತೆಗಳು ಇವೆ. ಹೀಗಾಗಿ ಯಾರಿಗೆ ಯಾವ ಸ್ಥಾನ ಸಿಗಲಿದೆ..? ಪ್ರಮುಖ ಖಾತೆಗಳು ಯಾರ ಕೈ ಸೇರಲಿವೆ ಅನ್ನೋದನ್ನ ಕಾದು ನೋಡಬೇಕಿದೆ.