‘ನನ್ನ ಸಾವಿನ ನಂತರ ನನ್ನ ಹಣವೆಲ್ಲ ಭಾರತಕ್ಕೆ ಹೋಗುತ್ತದೆ’ – ನಿತ್ಯಾನಂದ
ಭಾರತದಲ್ಲಿ ಅತ್ಯಾಚಾರ ಪ್ರಕರಣದ ಆರೋಪಿ ಮತ್ತು ಪರಾರಿಯಾಗಿದ್ದನೆಂದು ಘೋಷಿಸಲ್ಪಟ್ಟ ನಿತ್ಯಾನಂದನ ಮತ್ತೊಂದು ವಿಡಿಯೋ ಹೊರಬಂದಿದೆ. ಈ ವೀಡಿಯೊದಲ್ಲಿ ನಿತ್ಯಾನಂದ ಅವರು ದೇಶಭಕ್ತಿಯ ಹೊಸ ಹೇಳಿಕೆ ಕೊಟ್ಟಿದ್ದಾರೆ. ಭಾರತದಲ್ಲಿ ಆತನನ್ನು ಕೊಲ್ಲುವ ಪ್ರಯತ್ನ ನಡೆದಿತ್ತು. ಜನಸಮೂಹ ಹತ್ಯೆಗೆ ಯತ್ನಿಸಲಾಗಿದೆ ಎಂದು ನಿತ್ಯಾನಂದ ಹೇಳಿಕೊಂಡಿದ್ದಾನೆ. ಇದರಿಂದಾಗಿ ತಾನು ಭಾರತವನ್ನು ತೊರೆಯಬೇಕಾಯಿತು ಎಂದಿದ್ದಾನೆ.
ಭಾರತದಲ್ಲಿದ್ದಾಗ ಅನೇಕ ಬಾರಿ ಅವನನ್ನು ಕೊಲ್ಲಲು ಪ್ರಯತ್ನಿಸಲಾಗಿದೆ ಎಂದು ನಿತ್ಯಾನಂದ ಹೇಳಿದ್ದಾನೆ. ನಿತ್ಯಾನಂದ ಅವರು ಯಾವುದೇ ಸಂಪತ್ತನ್ನು ಸಂಪಾಸಿಸಿದ ಅಥವಾ ದಾನಧರ್ಮದಲ್ಲಿ ಪಡೆದ ಹಣ ತಮ್ಮ ಮರಣದ ನಂತರ ಭಾರತಕ್ಕೆ ಮರಳಿ ಹೋಗುತ್ತದೆ ಎಂದು ವೀಡಿಯೊದಲ್ಲಿ ಹೇಳಿದ್ದಾರೆ. ನಿತ್ಯಾನಂದ ಅವರ ಮರಣದ ನಂತರ ಅವರ ಇಚ್ಚೆಯಂತೆ ಅವರ ಸಮಾಧಿಯನ್ನು ಬೆಂಗಳೂರು ಆಶ್ರಮದಲ್ಲಿ ನಿರ್ಮಿಸಲಾಗುವುದು ಎಂದು ಹೇಳಿದರು.
ಹಿಂದುತ್ವವನ್ನು ರಕ್ಷಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ನಿತ್ಯಾನಂದ ಹೇಳಿದ್ದಾರೆ. ಇತ್ತೀಚೆಗೆ ನಿತ್ಯಾನಂದ ತನ್ನದೇ ದ್ವೀಪಕ್ಕೆ ಬರಲು ತನ್ನದೇ ಆದ ಚಾರ್ಟರ್ಡ್ ಫ್ಲೈಟ್ ಸೇವೆಯನ್ನು ಪ್ರಾರಂಭಿಸಿದ್ದಾಗಿ ಹೇಳಿಕೊಂಡಿದ್ದಾರೆ. ಇದರೊಂದಿಗೆ ಅವರು ಕೈಲಾಸಕ್ಕೆ ಬರಲು ವೀಸಾ ನೀಡುತ್ತಿದ್ದಾರೆ. ಜನರು ಮೂರು ದಿನಗಳ ಕಾಲ ಕೈಲಾಸ ದ್ವೀಪದಲ್ಲಿ ಇರಲು ಸಾಧ್ಯವಾಗುತ್ತದೆ ಎಂದು ನಿತ್ಯಾನಂದ ಹೇಳಿದ್ದರು. ಈ ಹಿಂದೆ ನಿತ್ಯಾನಂದ ಅವರು ತಮ್ಮದೇ ಆದ ‘ಸೆಂಟ್ರಲ್ ಬ್ಯಾಂಕ್’ ಮತ್ತು ಮುದ್ರಾವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು.