ವಾನರ ದಾಳಿಯಿಂದ ಶಾಸಕ ಬಚಾವ್ : ರೇಣುಕಾಚಾರ್ಯರನ್ನು ಕಂಡು ನುಗ್ಗಿ ಬಂತು ಕೋತಿ!
ನೀರು ಇಲ್ದೇ ಇರೋ ಜಾಗದಲ್ಲಿ ತೆಪ್ಪ ಹುಟ್ಟಾಕಿದ್ದಾಯ್ತು. ಬಸ್ ಓಡಿಸಿದ್ದಾಯ್ತು, ಹೋರಿ ಕೈಯಲ್ಲಿ ಗುಮ್ಮುಸಿಕೊಂಡಿದ್ದಾಯ್ತು. ಟಗರು ಕೈಯಿಂದ ತಪ್ಪಿಸಿಕೊಂಡಿದ್ದಾಯ್ತು. ಈಗ ಕೋತಿಯಿಂದ ತಪ್ಪಿಸಿಕೊಂಡಿದ್ದಾರೆ ಶಾಸಕ ರೇಣುಕಾಚಾರ್ಯ.
ಹೌದು… ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ತಾಲೂಕು ಕಚೇರಿ ಮುಂದೆ ಶಾಸಕರು ಕೋತಿಯಿಂದ ಬಚಾವ್ ಆಗಿದ್ದಾರೆ. ಈ ಪ್ರದೇಶದಲ್ಲಿ ಕೋತಿಯ ಹಾವಳಿ ಹೆಚ್ಚಾಗಿದೆ. ಕಳೆದ ಒಂದು ತಿಂಗಳಿನಿಂದ ಸ್ಥಳಿಯ ನಿವಾಸಿಗಳಿಗೆ ತೊಂದರೆ ಕೊಡುತ್ತಿದ್ದ ಕೋತಿ 20ಕ್ಕೂ ಹೆಚ್ಚು ಜನರ ಮೇಲೆ ದಾಳಿಗೆ ಮುಂದಾಗಿದೆ. ಹೀಗಾಗಿ ಕೋತಿ ಕಂಡರೆ ಇಲ್ಲಿನ ನಿವಾಸಿಗಳಿಗೆ ಕೊಂಚ ಆತಂಕವಿದೆ. ಇಂದು ದಾವಣಗೆರೆಯಲ್ಲಿ ಅದೇ ಕೋತಿ ಶಾಸಕರ ಮೇಲೂ ದಾಳಿ ಮಾಡಲು ಮುಂದಾಗಿತ್ತು. ಈ ವೇಳೆ ಶಾಸಕರು ಕೋತಿಯಿಂದ ಎಸ್ಕೇಪ್ ಆಗಿದ್ದಾರೆ.
ಈ ಹಿಂದೆ ಟಗರು ಕಾಳಗ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವೇಳೆ ಏಕಾಏಕಿ ಟಗರು ಬಂದು ಡಿಚ್ಚಿ ಹೊಡೆದಿದೆ. ಈ ವೇಳೆ ಎಚ್ಚೆತ್ತ ಶಾಸಕರು ಅನಾಹುತದಿಂದ ಪಾರಾಗಿದ್ದರು.