ಯುವಕರಿಂದ ಕಿರುಕುಳ : ಕೀಟನಾಶಕ ಸೇವಿಸಿ ಬಾಲಕಿ ಆತ್ಮಹತ್ಯೆ..!

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಎಲ್ಲರಿಗೂ ಆಶ್ಚರ್ಯವನ್ನುಂಟುಮಾಡುತ್ತವೆ. ಈಗ ಯುಪಿಯ ಬುಲಂದ್‌ಶಹರ್ ನಲ್ಲಿ‌ 14 ವರ್ಷದ ಮುಗ್ಧ ಬಾಲಕಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಲಕಿ ಆಸ್ಪತ್ರೆಯಿಂದ ಔಷಧಿಗಳೊಂದಿಗೆ ಹಿಂತಿರುಗುತ್ತಿದ್ದಾಗ ದಾರಿಯಲ್ಲಿ ಹಳ್ಳಿಯ ಮೂವರು ಯುವಕರು ಬಾಲಕಿಯನ್ನು ಹೊಲಕ್ಕೆ ಎಳೆದೊಯ್ದಿದ್ದಾರೆ. ನಂತರ ಅವರು ಅವಳಿಗೆ ಕಿರುಕುಳ ನೀಡಿ ವೀಡಿಯೊವನ್ನೂ ಮಾಡಿದ್ದಾರೆ. ಇದರಿಂದ ಮನನೊಂದ ಬಾಲಕಿ ಬಾಲಕಿ ಮನೆಯಲ್ಲಿ ಇಟ್ಟ ಕೀಟನಾಶಕವನ್ನು ಸೇವಿಸಿ ಸಾವನ್ನಪ್ಪಿದ್ದಾಳೆ.

ಈ ಪ್ರಕರಣದಲ್ಲಿ ಪೊಲೀಸರು ಮೂರು ಜನರ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಕುಟುಂಬ ಬಾಲಕಿಯನ್ನು ಪೋಸ್ಟ್‌ಮಾರ್ಟಂ ಇಲ್ಲದೆ ಅಂತ್ಯಕ್ರಿಯೆ ಮಾಡಿದೆ ಎಂದು ಪೊಲೀಸರು ಆರೋಪಿಸಿದ್ದಾರೆ. ಅಂತ್ಯಕ್ರಿಯೆಯ ಬಳಿಕ ಕುಟುಂಬ ಸದಸ್ಯರು ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ನಿರತರಾಗಿದ್ದಾರೆ.

ಬುಲಂದ್‌ಶಹರ್ ಜಿಲ್ಲೆಯ ಶಿಕಾರ್‌ಪುರ ಕೊಟ್ವಾಲಿ ಪ್ರದೇಶದ ಜಖೇಟಾ ಎಂಬ ಹಳ್ಳಿಯಿಂದಲೂ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿದೆ.

ಆಗಸ್ಟ್ 31 ರ ಸಂಜೆ 14 ವರ್ಷದ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಆತ್ಮಹತ್ಯೆಯ ಹಿಂದಿನ ಕಾರಣ ಕಿರುಕುಳವಾಗಿದೆ. ಹಳ್ಳಿಯ ಮೂವರು ಪುರುಷರು ಅವಳಿಗೆ ಕಿರುಕುಳ ಮಾಡಿದ್ದಾರೆಂದು ಆರೋಪಿಸಲಾಗಿದೆ. ಹಳ್ಳಿಯ ಹುಡುಗಿಯರಿಗೆ ಅಲ್ಲಿನ ಹೆಚ್ಚಾಗಿ ಕಿರುಕುಳ ನೀಡುತ್ತಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಅವರಿಗೆ ಪಾಠ ಕಲಿಸಲು ಅನೇಕ ಬಾರಿ ಪ್ರಯತ್ನಿಸಲಾಯಿತು, ಆದರೆ ಅವರು ತಮ್ಮ ಕಾರ್ಯಗಳನ್ನು ನಿಲ್ಲಿಸಿಲ್ಲ. ಈ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights