ಯುವತಿಗೆ ಇಂದು ಎಸ್ಐಟಿ ವಿಚಾರಣೆ ಬಳಿಕ ವೈದ್ಯಕೀಯ ಪರೀಕ್ಷೆ…!

ಇಂದು ಮತ್ತೆ ಸಿಡಿ ಲೇಡಿ ಎಸ್ಐಟಿ ವಿಚಾರಣೆಗೆ ಒಳಗಾಗಲಿದ್ದಾಳೆ. ಬಳಿಕ ವೈದ್ಯಕೀಯ ಪರೀಕ್ಷೆಗೆ ಆಕೆಯನ್ನು ಒಳಪಡಿಸಲಾಗುತ್ತದೆ.

ಹೀಗಾಗಲೇ ಸಿಡಿ ಲೇಡಿ ತಾನು ಹೇಗೆ ರಮೇಶ್ ಜಾರಕಿಹೊಳಿಗೆ ಪರಿಚಯವಾದಳು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಎಸ್ಐಟಿ ಮುಂದಿಟ್ಟಿದ್ದಾಳೆ. “ಕಿರು ಚಿತ್ರ ಮಾಡಲು ನಾನು ರಮೇಶ್ ಜಾರಕಿಹೊಳಿಗೆ ಕಾಲ್ ಮಾಡಿದೆ. ನಂತರ ನಮ್ಮ ಅವರ ಸಂಬಂಧ ಬೆಳಿಯಿತು. ಅವರು ಕಿರುಚಿತ್ರ ಮಾಡುವ ಬದಲಿಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು ಆಸೆ ಹುಟ್ಟಿಸಿದ್ದರು. ಇದಕ್ಕಾಗಿ ಅವರು ತಮಗೆ ಖುಷಿ ಪಡಿಸು ಎಂದು ಹೇಳಿದ್ದರು. ಕೆಲಸ ಸಿಗುತ್ತೆ ಅನ್ನೋ ಆಸೆಯಿಂದ ಅವರು ಹೇಳಿದಂತೆ ಕೇಳಿದೆ. ಯಾವುದೇ ಕಾರಣಕ್ಕೂ ಮೋಸ ಕೂಡ ಆಗಲ್ಲ ಎಂದು ಹೇಳಿದ್ದರು. ಆದರೆ ಕೆಲಸ ಕೇಳಿದರೆ ಬಾಯಿಗೆ ಬಂದಂತೆ ಬೈದು, ಕಾಸು ಬೇಕಾದರು ಕೇಳು ಸರ್ಕಾರಿ ಕೆಲಸ ಸಧ್ಯಕ್ಕೆ ಆಗಲ್ಲ ಎಂದಿದ್ದರು” ಎಂದು ಇದಕ್ಕೆ ಸಂಬಂಧಿಸಿದಂತೆ ಸಿಡಿಲೇಡಿ ಸಾಕ್ಷಿಗಳನ್ನು ಕೊಟ್ಟಿದ್ದಾಳೆ.

ಇದಕ್ಕೆ ಸಂಬಂಧಪಟ್ಟ 300 ಪುಟಗಳ ಚಾಟ್ ಲಿಸ್ಟ್ ಕೂಡ ಸಿಡಿ ಲೇಡಿ ಇಂದು ಕೊಡಲಿದ್ದಾಳೆ. ರಮೇಶ್ ಜಾರಕಿಹೊಳಿ ಕೊಡಿಸಿದ ಗಿಫ್ಟ್, ಮೊಬೈಲ್, ವಿಡಿಯೋ ಕಾಲ್, ಚಾಟ್, ಲೊಕೇಶನ್ ಎಲ್ಲವೂ ಎಸ್ಐಟಿಗೆ ಸಾಕ್ಷಿಗಳಾಗಿ ಯುವತಿ ಕೊಟ್ಟಿದ್ದಾಳೆ.

ಆದರೆ ರಮೇಶ್ ಜಾರಕಿಹೊಳಿ ಮಾತ್ರ ಸಿಡಿಯಲ್ಲಿರುವುದು ನಾನಲ್ಲ. ಆ ಯುವತಿ ಯಾರು ಎನ್ನುವುದೇ ನನಗೆ ಗೊತ್ತಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯೇ ರಮೇಶ್ ಜಾರಕಿಹೊಳಿಗೆ ಕುತ್ತು ತಂದಿದೆ.

ಡೇ ಒನ್ ನಿಂದ ರಮೇಶ್ ಜಾರಕಿಹೊಳಿಯೊಂದಿಗೆ ನಡೆದ ಸಂಭಾಷಣೆ ಚಾಟ್ ಲಿಸ್ಟ್ ನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನನ್ನನ್ನು ಯಾರೂ ಕೂಡ ಕಿಡ್ನ್ಯಾಪ್ ಮಾಡಿಲ್ಲ. ರಮೇಶ್ ತಮ್ಮ ಪ್ರಭಾವದಿಂದ ನನ್ನ ಪೋಷಕರೊಂದಿಗೆ ಸುಳ್ಳು ದೂರು ಕೊಡಿಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.

ಜೊತೆಗೆ ಯುವತಿ ದೂರಿನಲ್ಲಿ ” ತನ್ನನ್ನು ಎರಡು ಬಾರಿ ನನ್ನನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡರು. ಖಾಸಗೀ ಅಂಗಾಂಗಗಳನ್ನು ತೋರಿಸಲು ಪ್ರಚೋದಿಸುತ್ತಿದ್ದರು” ಎಂದು ಹೇಳಿಕೊಂಡಿದ್ದಾಳೆ.

ಹೀಗಾಗಿ ಇಂದು ಬೌರಿಂಗ್ ಆಸ್ಪತ್ರೆಯಲ್ಲಿ ಯುವತಿಗೆ ವೈದ್ಯಕೀಯ ಪರೀಕ್ಷೆ ನಡೆಯುವ ಸಾಧ್ಯತೆ ಇದೆ. ಪರೀಕ್ಷೆಗೆ ಆಕೆಯ ಗುಪ್ತಾಂಗದ ಸ್ವ್ಯಾಬ್ ತೆಗೆದುಕೊಳ್ಳಲಾಗುತ್ತದೆ. ಜೊತೆಗೆ ಆಕೆಗೆ ಕೊರೊನಾ, ಬಿಪಿ, ಶುಗರ್, ಹಾರ್ಟ್ ಚೆಕ್ ಮಾಡಲಾಗುತ್ತದೆ. ಇದಕ್ಕೆ ಬೇಕಾದ ಎಲ್ಲಾ ತಯಾರಿ ಈಗಾಗಲೇ ಮಾಡಿಕೊಳ್ಳಲಾಗಿದೆ. ಅತ್ಯಾಧ್ಯುನಿಕ ತಂತ್ರಜ್ಞಾನ ಇರುವುದರಿಂದ ಬೇಗನೇ ವರದಿ ಸಿಗುವ ಸಾಧ್ಯತೆ ಇದೆ.

ಇದರ ಜೊತೆಗೆ ಯುವತಿಯನ್ನು ಕೃತ್ಯ ಆದ ಸ್ಥಳಕ್ಕೂ ಕರೆದುಕೊಂಡು ಹೋಗಲಾಗುತ್ತದೆ. ನಿನ್ನೆ ಕೇವಲ ಯುವತಿ ಹೇಳಿಕೆಯನ್ನು ಮಾತ್ರ ಪಡೆಯಲಾಗಿತ್ತು. ಎಸ್ಐಟಿ ಯಾವುದೇ ಪ್ರಶ್ನೆ ಮಾಡಿರಲಿಲ್ಲ.. ಆದರೆ ಇಂದು ಎಸ್ಐಟಿ ಯುವತಿಗೆ ಕೆಲವೊಂದಿಷ್ಟು ಪ್ರಶ್ನೆಗಳನ್ನು ಕೇಳಲಿದೆ. ಇಂದು 10ಗಂಟೆಗೆ ಆಕೆ ವಿಚಾರಣೆಗೆ ಹಾಜರಾಗಲಿದ್ದಾಳೆ. ಇದಾದ ಬಳಿಕ ಸಾಹುಕಾರನ ವಿಚಾರಣೆ ಮಾಡಲಾಗುತ್ತದೆ.

ಒಟ್ಟಿನಲ್ಲಿ ಯುವತಿ ಕೊಟ್ಟ ಸಾಕ್ಷಿಗಳ ಮುಂದೆ ಸಾಹುಕಾರನ ಆಟ ನಡೆಯುತ್ತಾ ಅನ್ನೋದು ಸಧ್ಯ ದೊಡ್ಡ ಪ್ರಶ್ನೆಯಾಗಿದೆ. ಇದೆಲ್ಲವನ್ನು ನೋಡಿದರೆ ಸಾಹುಕಾರನಿಗೆ ಸಂಕಷ್ಟ ಕಾರಿರುವುದು ಸುಳ್ಳಲ್ಲ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights