ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ‘ಮಹಾ’ ಸಿಎಂ : ಕೆರಳಿದ ಕನ್ನಡಿಗರು!

ಪದೇ ಪದೇ ಗಡಿ ಕ್ಯಾತೆ ತೆಗೆದು ಉದ್ದಟತನ ಮಾತು ಆಡುತ್ತಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿ ಶಾಂತವಾಗಿದ್ದ ಕನ್ನಡಿಗರನ್ನು ಕೆರಳಿಸಿದ್ದಾರೆ.

ಇಂದು ಮಹಾರಷ್ಟ್ರ ಕರ್ನಾಟಕ ಸೀಮಾ ವಿವಾದ ಸಂಘರ್ಷ ಅನಿ ಸಂಕಲ್ಪ ಹೆಸರಿನ ಮರಾಠಿ ಪುಸ್ತಕವನ್ನು ಮಾಹಾರಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮುಂಬೈನ ಮಲಬಾರ್ ಹಿಲ್ ನಲ್ಲಿರುವ ಸಹ್ಯಾದ್ರಿ ರಾಜ್ಯ ಅತಿಥಿ ಗೃಹದಲ್ಲಿ ಬಿಡುಗಡೆ ಮಾಡಿದರು.

ಕರ್ನಾಟಕ ಮರಾಠಿ ಭಾಷಿತ ಪ್ರದೇಶ, ಬೆಳಗಾವಿ ಪಾಲಿಗಕೆಗೆ ಮರಾಠಿ ಮೇಯರ್ ಬೇಕು. ಮರಾಠಿ ಶಾಸಕರು ಗೆಲ್ಲಬೇಕು. ಬೆಳಗಾವಿ ವಿಚವಾರದಲ್ಲಿ ನಾವು ಕೋರ್ಟ್ ಮೂಲಕ ಗೆಲ್ಲುತ್ತೇವೆ. ಮರಾಠಿಗರ ಮೇಲೆ ದೇಶ ದ್ರೋಹದ ಕೇಸ್ ಹಾಕುತ್ತಾರೆ. ನಾವೇನು ಪಾಕಿಸ್ತಾನ ಪರ ಘೋಷಣೆ ಕೂಗಿದ್ವಾ? ಎನ್ನುವ ಮಾತನ್ನಾಡಿ ಶಾಂತವಾಗಿದ್ದ ಕನ್ನಡಿಗರನ್ನು ಕೆರಳಿಸಿದ್ದಾರೆ.

ಮೊನ್ನೆಯಷ್ಟೇ ” ಬೆಳಗಾವಿ ನಮ್ಮದಾಗುವವರೆಗೂ ಹೋರಾಡೋಣ” ಎನ್ನುವ ಟ್ವೀಟ್ ಮಾಡುವ ಮೂಲಕ ಬೆಳಗಾವಿ ಮತ್ತು ಮಹಾರಾಷ್ಟ್ರ ಗಡಿ ಭಾಗದಲ್ಲಿ ಶಿವಸೇನೆ ಕಾರ್ಯಕರ್ತರನ್ನು ಎತ್ತಗಟ್ಟಿದ್ರು. ಉದ್ಧವ್ ಟ್ವೀಟ್ ನಿಂದ ಪ್ರಚೋದನೆಗೊಂಡ ಶಿವಸೇನಾ ಕಾರ್ಯಕರ್ತರು ಬೆಳಗಾವಿ ಗಡಿಯಲ್ಲಿ ಕನ್ನಡ ಭಾವುಟ ತೆರವುಗೊಳಿಸಲು ಮುಂದಾಗಿದ್ದರು. ಇದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಟ್ವೀಟ್ ವಿರುದ್ಧ ರಾಜ್ಯಾದಂತ ಕನ್ನಡ ಪರ ಹೋರಾಟಗಾರರು ಪ್ರತಿಭಟನೆಗೆ ಮುಂದಾಗಿದ್ದರು. ಶಿವಸೇನೆ ರಾಜ್ಯದಲ್ಲಿ ಶಾಂತ ಕದಡುವ ಕೆಲಸ ಮಾಡುತ್ತಿದೆ. ಮಹಾರಾಷ್ಟ್ರ ಸಿಎಂಗೆ ತಕ್ಕ ಪಾಠ ಕಲಿಸಲು ರಾಜ್ಯ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಆದರಿಂದ ಮತ್ತೆ ಉದ್ದವ್ ಉದ್ದಟತನದ ಹೇಳಿಕೆ ನೀಡಿದ್ದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ, “ಉದ್ಧವ್ ಠಾಕ್ರೆಗೆ ಹುಚ್ಚು ಹಿಡಿದಿದೆ. ನಾವು ರೊಚ್ಚಿಗೆದ್ದರೆ ಸುಮ್ಮನಿರೋದಿಲ್ಲ. ಸುಮ್ಮನಿರದೇ ಎಂಇಎಸ್ ಕಿರಿಕ್ ಶುರು ಮಾಡಿದೆ. ಕನ್ನಡಗರನ್ನು ಕೆಣಗಿದರೆ ಸುಮ್ಮನಿರಲ್ಲ. ರಾಜ್ಯ ಸರ್ಕಾರ ಉದ್ಧವ್ ಹೇಳಿಕೆ ವಿರುದ್ಧ ಧ್ವನಿ ಎತ್ತಬೇಕು. ಸಿಎಂ ಯಡಿಯೂರಪ್ಪ ಸುಮ್ಮನೆ ಕುಳಿತುಕೊಳ್ಳದೇ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಬೇಕಿದೆ” ಎಂದು ಆಗ್ರಹಿಸಿದ್ದಾರೆ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights