ತೆರಿಗೆ ವಂಚನೆ ಪ್ರಕರಣ: ಸಂಗೀತ ಸಂಯೋಜಕ ಎ.ಆರ್‌ ರೆಹಮಾನ್‌ಗೆ ಮದ್ರಾಸ್‌ ಹೈಕೋರ್ಟ್‌ ನೋಟಿಸ್‌!

2011-12ನೇ ಸಾಲಿನಲ್ಲಿ ಆದಯ ತೆರಿಗೆ ಪಾವತಿಯಲ್ಲಿ ವಂಚನೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಅವರಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ನೀಡಿದೆ.

2011ರಲ್ಲಿ ಅಧಿಕ ಮೊತ್ತದ ಸಂಭಾವನೆ ಪಡೆದಿದ್ದ ರೆಹಮಾನ್‌, ಆ ಹಣವನ್ನು ಅಕ್ರಮವಾಗಿ ತಮ್ಮ ಚಾರಿಟಬಲ್‌ ಟ್ರಸ್ಟ್‌ಗೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಿ, ಐಟಿ ಇಲಾಖೆ ಮದ್ರಾಸ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿರುವ  ನ್ಯಾಯಮೂರ್ತಿಗಳಾದ ಟಿ ಎಸ್ ಶಿವಜ್ಞಾನಂ ಮತ್ತು ವಿ ಭವಾನಿ ಸುಬ್ಬರಾಯನ್  ಅವರ ದ್ವಿಸದಸ್ಯ ಪೀಠವು  ರೆಹಮಾನ್‌ ಅವರಿಗೆ ನೋಟಿಸ್ ನೀಡಿದೆ.

2011ರಲ್ಲಿ ರೆಹಮಾನ್‌ ಅವರು ಇಂಗ್ಲೆಂಡ್ ಮೂಲದ ಲಿಬ್ರಾ ಮೊಬೈಲ್ಸ್ ಟೆಲಿಕಾಂಗಾಗಿ ವಿಶೇಷ ರಿಂಗ್‌ ಟೋನ್‌ಗಳನ್ನು ಸಂಯೋಜನೆ ಮಾಡಿಕೊಡುವುದಕ್ಕಾಗಿ 3 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದರು. ಇದಕ್ಕಾಗಿ ಅಧಿಕ ಮೊತ್ತದ ಸಂಭಾವನೆಯನ್ನು ಪಡೆದಿದ್ದರು. ಆ ಸಂಭಾವನೆಯ 3.47 ಕೋಟಿ ರೂ ಹಣವನ್ನು ತಮ್ಮ ಚಾರಿಟಬಲ್‌ ಟ್ರಸ್ಟ್‌ಗೆ ನೇರವಾಗಿ ವರ್ಗಾಯಿಸುವಂತೆ ಸೂಚಿಸುದ್ದರು. ಇದು ಅಕ್ರಮವಾಗಿ ನಡೆದಿದೆ ಎಂದು ಐಟಿ ಇಲಾಖೆ ಹೇಳಿದೆ.

ಚಾರಿಟಬಲ್‌ ಟ್ರಸ್ಟ್‌ಗಳಿಗೆ ತೆರಿಗೆ ವಿನಾಯತಿ ನೀಡುವುದರಿಂದ ತೆರಿಕೆ ಪಾವತಿಯಿಂದ ತಪ್ಪಿಸಿಕೊಳ್ಳಲು ರೆಹಮಾನ್‌ ನೇರವಾಗಿ ಟ್ರಸ್ಟ್‌ಗೆ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಆದಾಯವನ್ನು ತೆರಿಗೆಗೆ ಒಳಪಡುವಂತೆ ಸ್ವೀಕರಿಸಬೇಕು. ತೆರಿಗೆ ಕಡಿತವಾದ ಬಳಿಕ ಅದನ್ನು ಟ್ರಸ್ಟ್‌ಗೆ ವರ್ಗಾಯಿಸಬೇಕು. ಸಂಭಾವನೆಯನ್ನು ನೇರವಾಗಿ ಟ್ರಸ್ಟ್ ಮೂಲಕ ರವಾನಿಸಲಾಗುವುದಿಲ್ಲ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: ಮನುಷ್ಯರ ಮೇಲೆ ಸೋಂಕುನಿವಾರಕ ಸಿಂಪಡಣೆ ಆರೋಗ್ಯಕ್ಕೆ ಹಾನಿಕಾರಕ: ಸಿಂಪಡಣೆ ತಡೆದು ಸುಪ್ರೀಂ ಸೂಚನೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights