ಕೊಪ್ಪಳ: ಕಷ್ಟ ಹೇಳಿಕೊಂಡ ಮತದಾರನಿಗೆ ಎರಡು ಹೊಡೆಯಿರಿ ಎಂದ ಬಿಜೆಪಿ ಶಾಸಕ

ಸಮಸ್ಯೆ ಹೇಳಿಕೊಂಡ ಮತದಾರನಿಗೆ ಎರಡೇಟು ಹಾಕಿ ಎಂದು ಶಾಸಕರೊಬ್ಬರು ಹೇಳಿದ ಪ್ರಸಂಗವೊಂದು ನಡೆದಿದೆ. ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಅದರಲ್ಲೂ ಆಡಳಿತಾರೂಢ ಬಿಜೆಪಿಯ ಶಾಸಕರೇ ಮತದಾರರೊಬ್ಬರಿಗೆ ಗದರಿದ್ದಾರೆ.

ಹೀಗೆ ಜನಸಾಮಾನ್ಯನನ್ನು ಗದರಿದ ಶಾಸಕರ ಹೆಸರು ಬಸವರಾಜ ದಢೇಸುಗೂರು. ಇವರು ಇಂದು ಕನಕಗಿರಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಪ್ರಚಾರಕ್ಕೆ ಬಂದಾಗ ಇಂಥದ್ದೊಂದು ಸನ್ನಿವೇಶ ಸೃಷ್ಟಿಯಾಗಿದೆ.

ಈ ಸಂದರ್ಭದಲ್ಲಿ ಮತದಾರರೊಬ್ಬರು ಆಸ್ಪತ್ರೆ ಸಮಸ್ಯೆಗಳನ್ನು ಸರಿಪಡಿಸಲು ಮನವಿ ಮಾಡಿಕೊಂಡಿದ್ದಾರೆ. ಇದರಿಂದ ಕೆರಳಿದ ಶಾಸಕ, ಮೊದಲು ಮನವಿ ಕೊಡು. ಅದು ಬಿಟ್ಟು ಸುಮ್ಮನೆ ಸಮಸ್ಯೆ ಹೇಳಬೇಡ. ಇಷ್ಟು ದಿನ ಏನು ಮಾಡಿದೆ? ಬೇಕೆಂದೇ ಪ್ರಚಾರಕ್ಕೆ ಅಡ್ಡಿಪಡಿಸುತ್ತಿಯಾ? ಇಂಥ ನಾಟಕಗಳನ್ನು ಮಾಡಬೇಡ ಎಂದು ಗದರಿದರು. ಅಲ್ಲದೇ ಅವನಿಗೆ ಎರಡೇಟು ಹಾಕಿದ್ರೆ ಸರಿಯಾಗುತ್ತಾನೆಂದು ಕಾರ್ಯಕರ್ತರಿಗೆ ಹೇಳುವ ಮೂಲಕ ಮತದಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights