ಕನ್ನಡ ಸಿನಿಮಾ ನಿರ್ಮಾಪಕಿ ಮಗನಿಂದ ಇಬ್ಬರ ಮಹಿಳೆಯರ ಮೇಲೆ ಹಲ್ಲೆ; 7 ಜನರ ವಿರುದ್ದ ಪ್ರಕರಣ ದಾಖಲು
ಕನ್ನಡ ಸಿನಿಮಾ ನಿರ್ಮಾಪಕಿ ಸೌಂದರ್ಯ ಜಗದೀಶ್ ಅವರ ಪುತ್ರ ಮತ್ತು ಅವರ ಅಂಗರಕ್ಷಕರು ಸೇರಿ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಿರುವ ಘಟನೆ ಅಕ್ಟೋಬರ್ 23ರ ಶನಿವಾರ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ಸಣ್ಣಪುಟ್ಟ ವಿಚಾರಕ್ಕಾಗಿ ತನ್ನ ನೆರೆಹೊರೆಯವರ ಮನೆಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ.
ನಟ ಸ್ನೇಹಿತ್ ಜಗದೀಶ್ (19) ಮತ್ತು ಇತರ ಏಳು ಮಂದಿಯ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.
ಕಾರ್ಮಿಕರಲ್ಲಿ ಒಬ್ಬರಾದ ಅನುರಾಧಾ ಅವರು ಪೊಲೀಸರಿಗೆ ದೂರು ನೀಡಿದ್ದು, ದೂರಿನಲ್ಲಿ ರೇಖಾ ಜಗದೀಶ್, ಭುವನಾ, ಲತಾ, ನಿಕಿಲ್, ಕುಮಾರ್, ಅಶೋಕ್ ಮತ್ತು ರಕ್ಷಿತ್ ಅವರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ.
ಸಂಜೆ 6 ರ ಸುಮಾರಿಗೆ, ಮಂಜುಳಾ ಪುರುಷೋತ್ತಮ್ ಅವರ ಮನೆಯಲ್ಲಿ ಕೆಲಸ ಮಾಡುವ ಇಬ್ಬರು ಕೆಲಸಗಾರರು ಕಸ ಗುಡಿಸುತ್ತಿದ್ದರು. ಅದಕ್ಕಾಗಿ ಸ್ನೇಹಿತ್ ಜಗದೀಶ್ ಅವರ ಅಂಗರಕ್ಷಕರನ್ನು ಬೇರೆ ಜಾಗದಲ್ಲಿ ಕೂರುವಂತೆ ಕೇಳಿದ್ದಾರೆ. ಅದಕ್ಕೆ ನಿರಾಕರಿಸಿದ ಅವರು, ಆಕೆಯನ್ನು ಹೊಡೆಯಲು ಆರಂಭಿಸಿದ್ದಾರೆ. ಅಲ್ಲದೆ, ಸ್ನೇಹಿತ್ ಅವರು ತಮ್ಮ ಬಟ್ಟೆಗಳನ್ನು ಎಳೆದರು ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ: ಮೀನುಗಾರಿಕೆ ಹೋದ ಬಾಲಕನನ್ನು ಎಳೆದೊಯ್ದ ಮೊಸಳೆ