ಫಿಲ್ಮ ಚೇಂಬರ್ ಗೆ ಜಗ್ಗೇಶ್ ಫ್ಯಾನ್ಸ್ ಮೊರೆ : ಸತ್ಯ ಪರಿಶೀಲನೆಗೆ ಒತ್ತಾಯ!

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಕಿಡಿ ಹಚ್ಚುತ್ತಿರುವವರು ಯಾರು..? ನಟ ದರ್ಶನ್ ಹಾಗೂ ಜಗ್ಗೇಶ್ ಮಧ್ಯೆ ಧ್ವೇಷ ಹುಟ್ಟುಹಾಕುತ್ತಿರುವವರು ಯಾರ..? ಇದನ್ನು ಪರಿಶೀಲನೆ ಮಾಡಬೇಕು ಎಂದು ಜಗ್ಗೇಶ್ ಅಭಿಮಾನಿಗಳು ಫಿಲ್ಮ ಚೇಂಬರ್ ಮೊರೆ ಹೋಗಿದ್ದಾರೆ.

ದರ್ಶನ್ ಬಗ್ಗೆ ಜಗ್ಗೇಶ್ ಕೀಳಾಗಿ ಮಾತನಾಡಿದ್ದಾರೆಂದು ಹೇಳುವ ಆಡಿಯೋ ಬಗ್ಗೆ ದರ್ಶನ್ ಫ್ಯಾನ್ಸ್ ಜಗ್ಗೇಶ್ ಶೂಟಿಂಗ್ ಸೆಟ್ ಗೆ ಹೋಗಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ರು. ಜಗ್ಗೇಶ್ ಅವರಿಗೆ ಕ್ಷಮೆ ಕೇಳುವಂತೆಯೂ ಮಾಡಿದರು. ಆದರೆ ಈ ಬಗ್ಗೆ ಜಗ್ಗೇಶ್ ಮಾತ್ರ ತಾವು ದರ್ಶನ್ ಬಗ್ಗೆ ಏನೂ ಮಾತನಾಡಿಲ್ಲ. ನಾನು ಮಾತನಾಡಿದ್ದು ಬೇರೆ ದರ್ಶನ್ ಬಗ್ಗೆ ಎಂದು ಸ್ಪಷ್ಟನೆ ನೀಡಿ ಇಂದು ಬೇಸರದ ವೀಡಿಯೋವನ್ನು ಹಂಚಿಕೊಂಡಿದ್ದರು.

ಹೀಗಾಗಿ ಇದರಲ್ಲಿ ಯಾವುದು ಸರಿ? ಯಾವುದು ಸುಳ್ಳು? ಎಂದು ತನಿಖೆ ಮಾಡಿ ಎಂದು ಜಗ್ಗೇಶ್ ಫ್ಯಾನ್ಸ್ ಫಿಲ್ಮ ಚೇಂಬರ್ ಮೊರೆ ಹೋಗಿದ್ದಾರೆ. ಜಗ್ಗೇಶ್ ಅಭಿಮಾನಿಗಳ ಪ್ರಕಾರ,

40 ವರ್ಷ ಕನ್ನಡ ಚಿತ್ರರಂಗದಲ್ಲಿ ಜಗ್ಗೇಶ್ ಶ್ರಮಿಸಿದ್ದಾರೆ. ಅವರಿಗೆ ಅವಮಾನ ಆಗಿದೆ. ಆಗಿರೋದು ಏನು ಪರಿಶೀಲನೆ ಮಾಡಬೇಕು. ದರ್ಶನ್ ಬಗ್ಗೆ ಮಾತನಾಡಿದ್ದೇ ಆದರೆ ಅದನ್ನು ಮಂಡಳಿಯಲ್ಲಿ ಕುಳಿತು ಪ್ರಶ್ನೆ ಮಾಡಲಿ. ಅದನ್ನ ಪ್ರಶ್ನೆ ಮಾಡೋಕೆ ಮಂಡಳಿ ಇದೆ. ಆದರೆ ಅಭಿಮಾನಿಗಳೇ ಶೂಟಿಂಗ್ ಸ್ಪಾಟ್ ಗೆ ಬಂದು ಪ್ರಶ್ನೆ ಮಾಡಿದ್ದಾರೆ. ಇದು ಹಿರಿಯ ನಟ ಜಗ್ಗೇಶ್ ಗೆ ಮಾಡಿದ ದೊಡ್ಡ ಅವಮಾನ. ಈ ರೀತಿ ವರ್ತಿಸುವುದು ಸರಿಯಲ್ಲ. ಹೀಗಾಗಿ ನಮಗೆ ಅದನ್ನು ಮಾಡಿದವರು ಯಾರು ಎಂದು ಕಂಡುಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ. ಅವರ ಮಧ್ಯೆ ನಡೆಯುತ್ತಿರುವುದು ದೊಡ್ಡ ವಿಷಯವೇ ಇಲ್ಲ. ಫಿಲ್ಮ ಚೇಂಬರ್ ನಲ್ಲಿ ಇದು ಇತ್ಯಾರ್ಥ ಆಗಬೇಕು ಎಂದು ಪಟ್ಟು ಹಿಡಿದಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights