ನನ್ನ ಜಮೀನಿಗೆ ಹೋಗಲು ಹೆಲಿಕಾಪ್ಟರ್ ಬೇಕು, ಸಾಲ ಕೊಡಿ: ರಾಷ್ಟ್ರಪತಿಗೆ ಪತ್ರ ಬರೆದ ಮಹಿಳೆ!
ನನ್ನ ಜಮೀನಿಗೆ ಹೋಗಲು ಹೆಲಿಕಾಪ್ಟರ್ ಬೇಕು. ಅದನ್ನು ಖರೀದಿಸಲು ನನಗೆ ಸಾಲ ಕೊಡಿ ಎಂದು ಮಹಿಳೆಯೊಬ್ಬರು ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.
ಮಧ್ಯಪ್ರದೇಶದ ಮಂಡ್ ಸೌರ್ ಜಿಲ್ಲೆಯ ಬಸಂತಿ ಎಂಬ ಮಹಿಳೆ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ಆಕೆಯ ಜಮೀನಿಗೆ ಹೋಗುವ ದಾರಿಯು ಬೇರೊಬ್ಬ ವ್ಯಕ್ತಿಯ ಜಮೀನಿಗೆ ಸೇರಿದ್ದು, ಆ ವ್ಯಕ್ತಿ ದಾರಿಯನ್ನು ಬಂದ್ ಮಾಡಿದ್ದಾನೆ. ಹಾಗಾಗಿ ಆಕೆ ತನ್ನ ಜಮೀನಿಗೆ ಹೋಗಲು ದಾರಿ ಇಲ್ಲದಂತಾಗಿದೆ. ಇದರಿಂದಾಗಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.
ರಾಷ್ಟ್ರಪತಿಗೆ ಬರೆದಿರುವ ಪತ್ರದಲ್ಲಿ, ತನ್ನ ಜಮೀನಿಗೆ ತೆರಳೋದಕ್ಕೆ ಇದ್ದಂತ ದಾರಿಯನ್ನು ರೈತ ಪರಮಾನಂದ್ ಪಾಟೀದಾರ್ ಮತ್ತು ಆತನ ಮಕ್ಕಳಾದ ಲವ, ಖುಷ್ ಎಂಬುವವರು ಬಂದ್ ಮಾಡಿದ್ದಾರೆ. ಇದರಿಂದ ನನ್ನ ಜಮೀನಿಗೆ ಹೋಗೋದಕ್ಕೆ ದಾರಿ ಇಲ್ಲ. ಯಾವುದೇ ಯಂತ್ರ, ಎತ್ತುಗಳನ್ನು ನನ್ನ ಜಮೀನಿಗೆ ಕೊಂಡೊಯ್ಯಲು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಹೀಗಾಗಿ ನನ್ನ ಜಮೀನಿಗೆ ತೆರಳೋದಕ್ಕೆ ಹೆಲಿಕಾಪ್ಟರ್ ಬೇಕು ಅದನ್ನು ಖರೀದಿಸೋದಕ್ಕೆ ಸಾಲ ನೀಡಿ ಮತ್ತು ಹಾರಾಟ ನಡೆಸಲು ಅನುಮತಿಗೆ ಸಹಾಯ ಮಾಡುವಂತೆ ಪತ್ರದಲ್ಲಿ ಕೋರಿದ್ದಾರೆ.
Alleging denial of passage into her agricultural plot, woman in MP's Mandsaur district writes to President of India for loan and license to fly by helicopter into her plot. On spot official probe, however, finds clear passage to woman's plot. @NewIndianXpress@TheMornStandard pic.twitter.com/zEiWdN0MiM
— Anuraag Singh (@anuraag_niebpl) February 12, 2021
ಈ ಸಂಬಂಧ ಈಗಾಗಲೇ ಗ್ರಾಮ ಪಂಚಾಯ್ತಿಯಿಂದ ಭೂಪಾಲ್ ನ ಉನ್ನತ ಅಧಿಕಾರಿಗಳಿಗೆ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕೆ ಆರೋಪಿಸಿದ್ದಾರೆ.
ಇದನ್ನೂ ಓದಿ: TMC ಭ್ರಷ್ಟಾಚಾರ ಮಾಡಿದೆ ಎಂದು BJP ಸಾಬೀತುಪಡಿಸದಿದ್ದರೆ ಮೋದಿ ಸರ್ಕಾರ ರಾಜೀನಾಮೆ ನೀಡಬೇಕು: ಮಮತಾ