ನಾಳೆ 3 ಗಂಟೆಗಳ ಕಾಲ ದೇಶಾದ್ಯಂತ ಹೆದ್ದಾರಿ ಸೇರಿ ಎಲ್ಲೆಡೆ ರಸ್ತೆ ತಡೆ…!
ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತ ಸಂಘಟನೆಗಳು ಇದೀಗ, ಫೆ.6ರಂದು ದೇಶವ್ಯಾಪಿ ರಸ್ತೆ ತಡೆ ಹೋರಾಟಕ್ಕೆ ನಿರ್ಧರಿಸಿವೆ. ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ 3 ಗಂಟೆಗಳ ಕಾಲ ರೈತ ಸಂಘಟನೆಗಳು ದೇಶಾದ್ಯಂತ ಹೆದ್ದಾರಿ ಸೇರಿದಂತೆ ಎಲ್ಲೆಡೆ ರಸ್ತೆ ತಡೆ ನಡೆಸಲಿವೆ.
ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿ ಭಾಗದಲ್ಲಿ ಕಳೆದ 3 ತಿಂಗಳಿಂದ ಪ್ರತಿಭಟನೆಗೆ ಮುಂದಾಗಿರುವ ರೈತರ ಜೊತೆಗೆ ಕೇಂದ್ರ ಸರ್ಕಾರ ಹಲವಾರು ಬಾರಿ ಸಭೆ ನಡೆಸಿದರೂ ರೈತರನ್ನು ಮನವೊಲಿಸಲು ವಿಫಲವಾಗಿದೆ. ರೈತರು ಕೃಷಿ ವಿರೋಧಿ ಕಾನೂನುಗಳನ್ನು ಕೈಬಿಡುವಂತೆ ಪಟ್ಟು ಹಿಡಿದಿದ್ದಾರೆ. ಸರ್ಕಾರದ ಗಮನ ಸೆಳೆಯಲು ದೆಹಲಿ ವಲೋ, ಉಪವಾಸ, ಮುತ್ತಿಗೆ, ಹೆದ್ದಾರಿ ಬಂದ್ ನಂತಹ ಶಾಂತಿಯುತ ಪ್ರತಿಭಟನೆ ಮಾಡಿಕೊಮಡು ಬಂದಿದ್ದಾರೆ. ನಾಳೆ ಹೆದ್ದಾರಿ ಬಂದ್ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಲಿದ್ದಾರೆ.
ಈಗಾಗಲೇ ದೆಹಲಿ ರೈತರ ಹೋರಾಟಕ್ಕೆ ರಾಜ್ಯದ ಅನ್ನದಾತರು ಸಾಥ್ ನೀಡಿದ್ದಾರೆ. ಕೊಡಿಹಳ್ಳಿ ನೇತೃತ್ವದಲ್ಲಿ 500 ರೈತರು ದೆಹಲಿಗೆ ತೆರಳಿ ರಾಕೆಶ್ ಟಿಕಾಯತ್ ಭೇಟಿ ಮಾಡಿದ್ದಾರೆ. ನಾಳೆ ರೈತ ಹೋರಾಟಕ್ಕೆ ಸಾಥ್ ನೀಡಲಿದ್ದಾರೆ.