ಗಾಂಧಿಯನ್ನು ಕೊಂದ ಗೋಡ್ಸೆ ಒಬ್ಬ RSS ಭಯೋತ್ಸಾದಕ: ನಟ ಸಿದ್ದಾರ್ಥ್

ಮಹಾತ್ಮ ಗಾಂಧಿಯನ್ನು ಗುಂಡಿಕ್ಕಿ ಕೊಂಡ ನಾಥುರಾಮ್‌ ಗೋಡ್ಸೆ ಒಬ್ಬ ಆರ್‌ಎಸ್‌ಎಸ್ಸಿಗ, ಭಯೋತ್ಪಾದಕ ಎಂದು ಎಂದು ಬಹುಭಾಷಾ ನಟ ಸಿದ್ದಾರ್ಥ್ ಟ್ವೀಟ್‌ ಮಾಡಿದ್ದಾರೆ.

ಗಾಂಧಿ ಹುತ್ಮಾತ್ಮ ದಿನದಂದು ಅವರನ್ನು ನೆನಪಿಸಿ ಟ್ವೀಟ್‌ ಮಾಡಿರುವ ನಟ, “ನಾಥೂರಾಮ್‌ ಗೋಡ್ಸೆ ಒಬ್ಬ ಹೇಡಿ, ಭಯೋತ್ಪಾದಕ, ಆರೆಸ್ಸೆಸ್ಸಿಗ ಮತ್ತು ಕೊಲೆಗಾರ. ಆತನ ಹೆಸರು ಭಾರತೀಯರಿಗೆ ಅಂಟಿರುವ ಕಳಂಕ, ಆತನ ಹೆಸರು ಭಾರತೀಯರಿಗೆ ಮುಜುಗರ ಉಂಟುಮಾಡುತ್ತದೆ” ಎಂದು ಪೋಸ್ಟ್‌ ಮಾಡಿದ್ದಾರೆ.

ಗಾಂಧಿ ಅವರನ್ನು ನಾಥೂರಾಮ್‌ ಗೋಡ್ಸೆ ಗುಂಡಿಕ್ಕಿ ಕೊಂದು ಇಂದಿಗೆ 73 ವರ್ಷಗಳು ಕಳೆದಿವೆ. ಇಂದು ದೇಶಾದ್ಯಂತ ಗಾಂಧಿ ಅವರ ಸ್ಮರಣೆ ನಡೆಯುತ್ತಿದೆ. ಕೃಷಿ ಕಾಯ್ದೆಗಳ ವಿರುದ್ದ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ದೇಶಾದ್ಯಂತ ಇಂದು ಉಪವಾಸ ನಡೆಸುವಂತೆ ಕರೆಕೊಟ್ಟಿದ್ದಾರೆ. ಎಲ್ಲಾ ರಾಜ್ಯಗಳಲ್ಲಿಯೂ ಬಹುಸಂಖ್ಯಾತ ರೈತರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ದೇಶದಲ್ಲಿ ಹಲವಾರು ಜನರು ಇಂದು ಗಾಂಧಿ ನೆನಪಿನಲ್ಲಿ ಉಪವಾಸ ಮಾಡುತ್ತಿದ್ದಾರೆ. ಹಲವು ಅಭಿಯಾನಗಳು ನಡೆಯುತ್ತಿವೆ. ಇದೇ ವೇಳೆ ಗೋಡ್ಸೆಯನ್ನೂ ಬೆಂಬಲಿಸಿ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ.

ಇದನ್ನೂ ಓದಿ: ದೆಹಲಿ ಘಟನೆಗೆ ಸರ್ಕಾರವೇ ಹೊಣೆ; ಜ.30ರ ಗಾಂಧಿ ಹುತಾತ್ಮ ದಿನ ಉಪವಾಸ ಸತ್ಯಾಗ್ರಹಕ್ಕೆ ರೈತರ ಕರೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights