Explained: ದೆಹಲಿ ವೈದ್ಯರು ಏಕೆ ಪ್ರತಿಭಟನೆ ನಡೆಸುತ್ತಿದ್ದಾರೆ?

ಕೊರೊನಾ ವೈರಸ್‌ನ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ದೆಹಲಿಯಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದ್ದು, ಸಿನಿಮಾ ಪ್ರದರ್ಶನವನ್ನು ನಿರ್ಬಂಧಿಸಲಾಗಿದೆ. ಮೆಟ್ರೋ, ಬಸ್‌ಗಳು 50% ಆಸನಗಳೊಂದಿಗೆ ಸಂಚರಿಸುವಂತೆ ತಿಳಿಸಲಾಗಿದೆ. ಇದೇ ವೇಳೆ, ವೈದ್ಯಕೀಯ ಕಾಲೇಜು- ಆಸ್ಪತ್ರೆಗಳ ಸಾವಿರಾರು ವೈದ್ಯರು NEET-PG ಕೌನ್ಸೆಲಿಂಗ್ ಅನ್ನು ಶೀಘ್ರವಾಗಿ ನಡೆಸಬೇಕೆಂದು ಒತ್ತಾಯಿಸಿ ಬೀದಿಗಿಳಿದಿದ್ದಾರೆ.

ವೈದ್ಯರು ಏಕೆ ಪ್ರತಿಭಟನೆ ನಡೆಸುತ್ತಿದ್ದಾರೆ?

MBBS ಪದವಿ ಮತ್ತು ಇಂಟರ್ನ್‌ಶಿಪ್ ಅನ್ನು ಪೂರ್ಣಗೊಳಿಸಿದ ವೈದ್ಯರು ವೈದ್ಯಕೀಯ ಅಥವಾ ಶಸ್ತ್ರಚಿಕಿತ್ಸೆಯಂತಹ ನಿರ್ದಿಷ್ಟ ವಿಶೇಷತೆಗಾಗಿ ಅಧ್ಯಯನ ಮಾಡಲು ಸ್ನಾತಕೋತ್ತರ ಕೋರ್ಸ್‌ಗಳಿಗೆ (NEET-PG) ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಈ ಪರೀಕ್ಷೆಯು ಸಾಮಾನ್ಯವಾಗಿ ಜನವರಿಯಲ್ಲಿ ನಡೆಯುತ್ತದೆ. ಆದರೆ, ಪರೀಕ್ಷೆಯನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಮಂಡಳಿಯು ಕಳೆದ ವರ್ಷ ನವೆಂಬರ್‌ನಲ್ಲಿ ಕೋವಿಡ್ -19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಸೂಚನೆ ಬರುವವರೆಗೆ ಪರೀಕ್ಷೆಯನ್ನು ನಡೆಸುವಂತಿಲ್ಲ ಎಂದು ಮುಂದೂಡಿತ್ತು.

ಈ ಪರೀಕ್ಷೆ ಏಪ್ರಿಲ್‌ನಲ್ಲಿ ನಡೆಯಬೇಕಿತ್ತು. ಆದರೆ, ಅಂತಿಮವಾಗಿ ಸೆಪ್ಟೆಂಬರ್‌ನಲ್ಲಿ ಪರೀಕ್ಷೆ ನಡೆಯಿತು. ಆದಾಗ್ಯೂ, ತರಬೇತಿಯ ಜೊತೆಗೆ ಜೂನಿಯರ್ ರೆಸಿಡೆಂಟ್‌ಗಳಾಗಿ ಕೆಲಸ ಮಾಡುವ ಪಿಜಿ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಮತ್ತು ಪ್ರವೇಶ ಪ್ರಕ್ರಿಯೆಯು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಹೊಸದಾಗಿ ಪರಿಚಯಿಸಲಾದ ಕೋಟಾಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳ ವಿಚಾರಣೆ ಶೀಘ್ರವಾಗಿ ಪ್ರಾರಂಭವಾಗಲಿಲ್ಲ.

ಸುಪ್ರೀಂ ಕೋರ್ಟ್ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸಬೇಕು ಮತ್ತು ಕೋಟಾದ ಅರ್ಹತೆಗಾಗಿ 8 ಲಕ್ಷ ವಾರ್ಷಿಕ ಆದಾಯದ ಆಯ್ಕೆ ಮಾನದಂಡಗಳ ಕುರಿತು ಕೇಂದ್ರ ಆರೋಗ್ಯ ಸಚಿವಾಲಯವು ವರದಿಯನ್ನು ತ್ವರಿತವಾಗಿ ಸಲ್ಲಿಸಬೇಕು ಎಂದು ವೈದ್ಯರು ಒತ್ತಾಯಿಸುತ್ತಿದ್ದಾರೆ.

ವಿಳಂಬವು ಆಸ್ಪತ್ರೆ ಸೇವೆಗಳ ಮೇಲೆ ಹೇಗೆ ಪರಿಣಾಮ ಬೀರಿದೆ?

ಕಿರಿಯ ವೈದ್ಯೆರು (ರೆಸಿಡೆಂಟ್ಸ್‌) ತಮ್ಮ ಪಿಜಿ ಕೋರ್ಸ್ ಪೂರ್ಣಗೊಳಿಸಿದ ನಂತರ, ದೇಶಾದ್ಯಂತ ದೊಡ್ಡ ವೈದ್ಯಕೀಯ ಕಾಲೇಜು- ಆಸ್ಪತ್ರೆಗಳಲ್ಲಿ ನೀಡಲಾಗುವ ಸೇವೆಗಳಲ್ಲಿ ಹಿರಿಯ ವೈದ್ಯರುಗಳೊಂದಿಗೆ ಬೆನ್ನೆಲುಬಾಗಿದ್ದಾರೆ. ತಮ್ಮ ಮೂರು ವರ್ಷಗಳ ಪಿಜಿ ತರಬೇತಿಯನ್ನು ಪೂರ್ಣಗೊಳಿಸಿದವರು, ತಾವು ಓದಿದ ಅಥವಾ ಇತರ ಆಸ್ಪತ್ರೆಗಳಲ್ಲಿ ಉದ್ಯೋಗಕ್ಕೆ ತೆರಳುತ್ತಾರೆ. ಒಳಬರುವ ಬ್ಯಾಚ್‌ನ ಕೊರತೆಯು ಅಂತಹ ಆಸ್ಪತ್ರೆಗಳಲ್ಲಿ ಮೂರನೇ ಒಂದು ಭಾಗದಷ್ಟು ಸಿಬ್ಬಂದಿ ಕೊರತೆಗೆ ಕಾರಣವಾಗಿದೆ.

ಕೊರತೆಯನ್ನು ಸರಿದೂಗಿಸಲು, ಸೇವೆಯಲ್ಲಿರುವ ವೈದ್ಯರು ಸಾಂಕ್ರಾಮಿಕ ರೋಗದ ಆಕ್ರಮಣದ ಸಂದರ್ಭದಲ್ಲಿ ವಾರಕ್ಕೆ 100 ರಿಂದ 120 ಗಂಟೆಗಳವರೆಗೆ ಕೆಲಸ ಮಾಡುತ್ತಿದ್ದಾರೆ. ವೈದ್ಯರು ದಣಿದಿದ್ದಾರೆ ಮತ್ತು ಆದ್ದರಿಂದ ಆದಷ್ಟು ಬೇಗ ಕೌನ್ಸೆಲಿಂಗ್ ನಡೆಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ವೈದ್ಯರು ಹೇಳುತ್ತಾರೆ. ವಿಶೇಷವಾಗಿ, ಕೊರೊನಾದ ಮತ್ತೊಂದು ಅಲೆಯು ಹತ್ತಿರದಲ್ಲಿದೆ.

ವಿಳಂಬದಿಂದಾಗಿ ಸುಮಾರು 45,000 ವೈದ್ಯಕೀಯ ವಿದ್ಯಾರ್ಥಿಗಳ ಒಂದು ವರ್ಷದ ಶಿಕ್ಷಣ ವೆಚ್ಚವಾಗಿದೆ. ಅವರು ಇನ್ನೂ ಉದ್ಯೋಗಗಳಿಗೆ ಸೇರಲು ಕಾಯುತ್ತಿದ್ದಾರೆ.

ಪ್ರತಿಭಟನೆಯಲ್ಲಿ ಭಾಗವಹಿಸುವವರು ಯಾರು?

ಸುಮಾರು ಒಂದು ತಿಂಗಳ ಹಿಂದೆ ರೆಸಿಡೆಂಟ್ಸ್‌ ವೈದ್ಯರು (ಕಿರಿಯ ಮತ್ತು ಹಿರಿಯ ಇಬ್ಬರೂ) ಮೊದಲು OPD ಸೇವೆಗಳಿಂದ ಹಿಂದೆ ಸರಿದರು. ನಂತರ ವಾರ್ಡ್‌ನಲ್ಲಿರುವ ರೋಗಿಗಳ ದಿನನಿತ್ಯದ ಆರೈಕೆಯಲ್ಲಿ ತೊಡಗಿದ್ದವು. ಬಳಿಕ, ಯೋಜಿತ ಶಸ್ತ್ರಚಿಕಿತ್ಸೆಗಳು ಮತ್ತು ಅಂತಿಮವಾಗಿ ತುರ್ತು ಸೇವೆಗಳಲ್ಲಿ ನಿರತವಾಗಿದ್ದವರೂ ಪ್ರತಿಭಟನೆಗೆ ಇಳಿದರು.

ಆಸ್ಪತ್ರೆಯಲ್ಲಿ ಹಿರಿಯ ಅಧ್ಯಾಪಕರು ಮತ್ತು ಸಲಹೆಗಾರರು ಸೇವೆಗಳನ್ನು ನಿರ್ವಹಿಸುತ್ತಿದ್ದಾರೆ. ಆದಾಗ್ಯೂ, ತೀವ್ರವಾದ ಸಿಬ್ಬಂದಿ ಕೊರತೆಯಿಂದ, ಆಸ್ಪತ್ರೆಗಳು ರೋಗಿಗಳ ದಾಖಲಾತಿಗಳನ್ನು ನಿರ್ಬಂಧಿಸಬೇಕಾಗಿತ್ತು. ಶಸ್ತ್ರಚಿಕಿತ್ಸೆಗಳನ್ನು ರದ್ದುಗೊಳಿಸಬೇಕಾಗಿತ್ತು ಮತ್ತು ಒಪಿಡಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯನ್ನು ಕಡಿಮೆ ಮಾಡಬೇಕಾಗಿತ್ತು.

ಕೇಂದ್ರ ಆರೋಗ್ಯ ಸಚಿವರ ಭರವಸೆಯ ಮೇರೆಗೆ ಮುಷ್ಕರವನ್ನು ಒಂದು ವಾರದವರೆಗೆ ನಿಲ್ಲಿಸಲಾಗಿತ್ತು. ಆದರೆ, ಯಾವುದೇ ಬೆಳವಣಿಗೆ ಕಾರಣದ ಹಿನ್ನೆಲೆಯಲ್ಲಿ ಡಿಸೆಂಬರ್ 17 ರಂದು ಪ್ರತಿಭಟನೆ ಮತ್ತೆ ಪುನರಾರಂಭಿಸಲಾಯಿತು.

ನಿನ್ನೆ ಐಟಿಒದಲ್ಲಿ ಸುಪ್ರೀಂ ಕೋರ್ಟ್‌ಗೆ ತೆರಳುತ್ತಿದ್ದ ವೈದ್ಯರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: ಮಹಾತ್ಮ ಗಾಂಧಿ ಕುರಿತು ಅವಹೇಳನಾಕಾರಿ ಹೇಳಿಕೆ: ಹಿಂದೂತ್ವವಾದಿ ಕಾಳಿಚರಣ್ ಮಹಾರಾಜ್ ವಿರುದ್ಧ ಪ್ರಕರಣ ದಾಖಲು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights