ಕಳ್ಳತನದ ಆರೋಪ : ಬುಡಕಟ್ಟು ವ್ಯಕ್ತಿಯ ಕಾಲನ್ನು ವಾಹನಕ್ಕೆ ಕಟ್ಟಿ ಎಳೆದೊಯ್ದ ವಿಡಿಯೋ ವೈರಲ್!
ಬುಡಕಟ್ಟು ವ್ಯಕ್ತಿಯ ಮೇಲೆ ಕಳ್ಳತನದ ಆರೋಪ ಮಾಡಿ ವಾಹನಕ್ಕೆ ಕಟ್ಟಿ ಎಳೆದೊಯ್ದ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಕನ್ಹಯಾಲಾಲ್ ಭೀಲ್ (40) ಎಂಬಾತನನ್ನು ಥಳಿಸಿ ಅಮಾನವೀಯವಾಗಿ ನಡೆಸಿಕೊಂಡ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ಭೀಲ್ ನನ್ನು ಕಳ್ಳತನದ ಶಂಕೆಯಿಂದ ಥಳಿಸಲಾಗಿದ್ದು ಲಾರಿಯ ಹಿಂಭಾಗಕ್ಕೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ಯಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಭೀಲ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಶುಕ್ರವಾರ ಮೃತಪಟ್ಟಿದ್ದಾನೆ.
ಘಟನೆಯಲ್ಲಿ ಚಿತರ್ ಮಾಲ್ ಗುರ್ಜಾರ್ (32), ಮಹೇಂದ್ರ ಗುರ್ಜಾರ್ ಮತ್ತು ಗೋಪಾಲ್ ಗುರ್ಜಾರ್ (ಇಬ್ಬರೂ 40), ಲೋಕೇಶ್ ಬಲೈ (21), ಮತ್ತು ಲಕ್ಷ್ಮಣ್ ಗುರ್ಜರ್ ಎಂದು ಗುರುತಿಸಲಾದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನೀಮಚ್ ಎಸ್ಪಿ ಪ್ರಕಾರ, ಉಳಿದ ಮೂವರನ್ನು ಪತ್ತೆ ಮಾಡಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
पुलिस अधीक्षक श्री सुरज कुमार वर्मा द्वारा प्रेस वार्ता कर सिंगोली प्रकरण का खुलासा – सदोष मानव वध व हत्या करने वाले 05 आरोपी गिरफ्तार व एक कार, एक पिकअप व एक मोटर साईकल जप्त, सिंगोली पुलिस की कार्यवाही @CMMadhyaPradesh @drnarottammisra @DGP_MP
@DIG_RATLAM_MP @PHQ_Editorial pic.twitter.com/lsVbevjnrO— S.P.Neemuch (M.P.) (@SPNEEMUCH) August 28, 2021
ಎಲ್ಲ ಎಂಟು ಆರೋಪಿಗಳ ಮೇಲೂ ಸೆಕ್ಷನ್ 302 (ಕೊಲೆಗೆ ಶಿಕ್ಷೆ) ಮತ್ತು ಭಾರತೀಯ ದಂಡ ಸಂಹಿತೆ ಮತ್ತು SC/ST (ದೌರ್ಜನ್ಯ ತಡೆ) ಕಾಯ್ದೆಯ ಇತರ ಸೆಕ್ಷನ್ ಗಳ ವಿರುದ್ಧ ಆರೋಪ ಹೊರಿಸಲಾಗಿದೆ.
ಜೊತೆಗೆ ಆರೋಪಿ ಚಿತರ್ ಮಾಲ್ ಗುರ್ಜರ್ ಅವರ ಮೋಟಾರ್ ಸೈಕಲ್, ಎರಡು ನಾಲ್ಕು ಚಕ್ರದ ವಾಹನಗಳು ಮತ್ತು ನೈಲಾನ್ ಹಗ್ಗವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಸೂರಜ್ ಕುಮಾರ್ ವರ್ಮಾ ಮಾಹಿತಿ ನೀಡಿದರು.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅಮಾನವೀಯ ಘಟನೆಯನ್ನು ಖಂಡಿಸಿದರು. ಈ ಘಟನೆಯ ವಿಡಿಯೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ये मध्यप्रदेश में हो क्या रहा है…?
अब नीमच ज़िले के सिंगोली में कन्हैयालाल भील नाम के एक आदिवासी व्यक्ति के साथ बर्बरता की बेहद अमानवीय घटना सामने आयी है ?
मृतक को चोरी की शंका पर बुरी तरह से पीटने के बाद उसे एक वाहन से बांधकर निर्दयता से घसीटा गया, जिससे उसकी मौत हो गयी ? pic.twitter.com/96r1zUQBDs
— Kamal Nath (@OfficeOfKNath) August 28, 2021
ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್, ಇಂತಹ ಘಟನೆಗಳನ್ನು ಪರಿಶೀಲಿಸಲು ರಾಜ್ಯ ಸರ್ಕಾರವು ತಕ್ಷಣವೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ಅವರು ಆಗ್ರಹಿಸಿದರು.