ಡಾ. ರಾಜ್‌ ಅಗಲಿ 15 ವರ್ಷ; ಕನ್ನಡದ ವರನಟರನ್ನು ಸ್ಮರಿಸಿದ ಗಣ್ಯ-ಅಭಿಮಾನಿಗಳು!

ಕನ್ನಡ ಮಾತ್ರವಲ್ಲದೇ, ಇಡೀ ಭಾರತದ ಚಿತ್ರರಂಗದಲ್ಲಿಯೇ ಹೆಸರು ಗಳಿಸಿ, ಛಾಪು ಮೂಡಿಸಿದ್ದ, ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್‌ಕುಮಾರ್‌ ಅವರು ತಮ್ಮ ಅಭಿಮಾನಿಗಳನ್ನು ಅಗಲಿ ಇಂದಿಗೆ 15 ವರ್ಷ ಕಳೆದಿವೆ. ನಟ ಸಾರ್ವಭೌಮನನ್ನು ಇಂದು ಕನ್ನಡ ಚಿತ್ರರಂಗ ಮತ್ತು ಹಲವಾರು ಗಣ್ಯರು ಸ್ಮರಿಸಿ, ಗೌರವ ಅರ್ಪಿಸಿದ್ದಾರೆ.

05 ದಶಕಗಳ ಕಾಲ ಕನ್ನಡ ಚಿತ್ರೋದ್ಯಮದಲ್ಲಿ ದುಡಿದ, ಚಿತ್ರರಂಗ ವಿವಿಧ ರೀತಿಯಲ್ಲಿ ಮೆರುಗು ಕೊಟ್ಟು, ಆದರ್ಶವಾಗಿದ್ದ ಡಾ. ರಾಜ್‌ ಅವರು ತಮ್ಮ ನಟನೆ ಮಾತ್ರವಲ್ಲದೆ, ಕಂಠ ಸಿರಿಯಲ್ಲೂ ಅಭಿಮಾನಿಗಳ ಮನದಲ್ಲಿ ರಂಗು ಚೆಲ್ಲಿಸಿದ್ದರು.

76 ವರ್ಷಗಳ ಕಾಲ ಜೀವಿಸಿದ್ದ ವರನಟ 2006ರ ಏಪ್ರಿಲ್‌ 12 ರಂದು ಇಹಲೋಕ ತ್ಯಜಿಸಿದ್ದರು.

ಡಾ. ರಾಜ್‌ ಅವರನ್ನು ಸ್ಮರಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, “ಅಪ್ರತಿಮ ಕಲಾವಿದ, ಕನ್ನಡ ಚಿತ್ರರಂಗದ ಮೇರುನಟ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಪದ್ಮಭೂಷಣ, ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಅವರ ಪುಣ್ಯತಿಥಿಯಂದು ಅಭಿಮಾನಪೂರ್ವಕ ನಮನಗಳು. ಕೋಟ್ಯಂತರ ಅಭಿಮಾನಿಗಳ ಪಾಲಿನ ನೆಚ್ಚಿನ ’ಅಣ್ಣಾವ್ರು’, ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ” ಎಂದು ಟ್ವೀಟ್‌ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights