ರಜಿನಿಕಾಂತ್‌ ರಾಜಕೀಯದಿಂದ ದೂರ ಉಳಿದದ್ದು ನಿರಾಶೆಯಾಗಿದೆ: ಕಮಲ್‌ ಹಾಸನ್‌

ಆರೋಗ್ಯದ ಕಾರಣಗಳನ್ನ ಹೇಳಿ ರಾಜಕೀಯದಿಂದ ರಜಿನಿಕಾಂತ್ ಹಿಂದೆ ಸರಿಯುವುದಾಗಿ ಹೇಳಿದ್ದು ಅವರ ಅಭಿಮಾನಿಗಳ ಜೊತೆಗೆ ಅವರ ಗರಳೆಯರು ಮತ್ತು ಎದುರಾಳಿಗಳಿಗೆ ನಿರಾಸೆಯಾಗಿದೆ.. ಅವರ ಈ ನಿರ್ಧಾರ  ಮಕ್ಕಳ್ ನೀಧಿ ಮಯ್ಯಮ್ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್‌ಗೂ ನಿರಾಸೆ ತಂದಿದೆ..

ಚಿತ್ರದ ಶೂಟಿಂಗ್ ವೇಳೆ ತಲೈವಾ ರಜಿನಿಕಾಂತ್ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕೂಡಲೇ ಅವರನ್ನ ಹೈದರಾಬಾದ್ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾದ ಮರು ದಿನ ರಾಜಕೀಯ ಪಕ್ಷ ಸ್ಥಾಪನೆಯ ನಿರ್ಧಾರದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು.

ಈ ಬಗ್ಗೆ ಕಮಲ್ ಹಾಸನ್ ಪ್ರತಿಕ್ರಿಯೆ ನೀಡಿದ್ದು, ಚುನಾವಣಾ ಪ್ರಚಾರದ ಬಳಿಕ ಅವರನ್ನು ಭೇಟಿಯಾಗುತ್ತೇನೆ. ಅವರ ಅಭಿಮಾನಿಗಳಂತೆ ನನಗೂ ನಿರಾಶೆಯಾಗಿದೆ. ಆದರೆ ಅವರ ಆರೋಗ್ಯ ನನಗೆ ಮುಖ್ಯವಾಗಿದೆ. ಅವರು ಆರೋಗ್ಯವಾಗಿರಬೇಕು ಮತ್ತು ಚೆನ್ನಾಗಿರಬೇಕು ಎಂದು ತಿಳಿಸಿದರು.

ರಜನಿಕಾಂತ್ ಅವರು ಡಿಸೆಂಬರ್ 31 ರಂದು ರಾಜಕೀಯ ಪ್ರವೇಶ ಮತ್ತು ತಮ್ಮ ಪಾರ್ಟಿ ಬಗ್ಗೆ ಸಂಪೂರ್ಣ ಮಾಹಿತಿ ನೀಡೋದಾಗಿ ಈ ಹಿಂದೆ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದರು.


ಇದನ್ನೂ ಓದಿ: ಲವ್ ಜಿಹಾದ್ ಕಾನೂನಿನ ಬಗ್ಗೆ 104 ನಿವೃತ್ತ ಅಧಿಕಾರಿಗಳಿಂದ ಸಿಎಂ ಯೋಗಿಗೆ ಪತ್ರ..!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights