ದೇವೇಗೌಡರ ಭಾವನಾತ್ಮಕ ಮಾತಿಗೆ ಕಟ್ಟುಬಿದ್ದು ಹೆಸರು ಕೆಡಿಸಿಕೊಂಡೆ: ಹೆಚ್ಡಿ ಕುಮಾರಸ್ವಾಮಿ
ಸಿದ್ಧರಾಮಯ್ಯ ಅವರ ಕುತಂತ್ರ ಹಾಗೂ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರ ಭಾವನಾತ್ಮಕ ಮಾತಿಗೆ ಕಟ್ಟುಬಿದ್ದು ನಾನು ಹೆಸರು ಕೆಡಿಸಿಕೊಂಡೆ. ನಾನು ಅವರ ಮಾತನ್ನು ಕೇಳದೇ ಇದ್ದಿದ್ದರೆ, ಈಗಲೂ ನಾನು ಮುಖ್ಯಮಂತ್ರಿ ಆಗಿರುವ ಅವಕಾಶ ಇರುತ್ತಿತ್ತು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚಿಸಿದ್ದರಿಂದಾಗಿ ನನಗಿದ್ದ ಒಳ್ಳೆಯ ಹೆಸರು, ವರ್ಚಸ್ಸು ನಾಶವಾಯಿತು. ಸಿದ್ಧರಾಮಯ್ಯ ಅವರ ಕುತಂತ್ರ ಹಾಗೂ ಹೆಚ್ ಡಿ ದೇವೇಗೌಡರ ಭಾವನಾತ್ಮಕ ಮಾತಿಗೆ ಕಟ್ಟುಬಿದ್ದಿದ್ದರಿಂದಾಗಿ ನನ್ನ ಹೆಸರು ಹಾಳಾಯಿತು. ಬಿಜೆಪಿ ಜೊತೆ ಮೈತ್ರಿಯಿಂದಲೂ ನನಗೆ ಇಷ್ಟೊಂದು ದ್ರೋಹ ಆಗಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
2006ರಲ್ಲಿ ಮುಖ್ಯಮಂತ್ರಿಯಾದಾಗ ರಾಜ್ಯದಲ್ಲಿ ನನಗೆ ಒಳ್ಳೆಯ ಹೆಸರು ಇತ್ತು. ಇದೇ ಕಾರಣದಿಂದಾಗಿ ನನ್ನನ್ನು ಈ ರಾಜ್ಯದ ಜನರು 12 ವರ್ಷ ಸಾಕಿದರು. ಆದರೆ, ಕಾಂಗ್ರೆಸ್ ಎಣೆಗೆ ಬಲೆಗೆ ಸಿಕ್ಕು ನಾನು ಹೆಸರು ಕೆಡಿಸಿಕೊಂದೆ. ನನ್ನ ಹೆಸರು ಕೆಡಿಸಲೆಂದು ಕಾಂಗ್ರೆಸ್ ಕುತಂತ್ರ ಎಣೆದಿತ್ತು. ಜೊತೆಗೆ ದೇವೇಗೌಡರ ಮಾತು ಕೇಳಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡೆ. ಮತ್ತೆಂದು ಇಂತಹ ತಪ್ಪು ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಹೈದರಾಬಾದ್ ಚುನಾವಣೆ: ಗೆದ್ದು ಸೋತ TRS; ಸೋತು ಗೆದ್ದಿದೆ BJP