ಜಾತಿ ದ್ವೇಷಕ್ಕೆ ದಲಿತ ಕುಟುಂಬದ ಹತ್ಯೆ: ಕೊಲೆ ಮಾಡಲು ಮಗನನ್ನು ಪ್ರಚೋದಿಸಿದ ತಂದೆ!

ರಾಮಸ್ವಾಮಿ ಮತ್ತು ಅವರ ಪತ್ನಿ ಅರುಕ್ಕಾಣಿ ಎಂಬ ದಲಿತ ದಂಪತಿಗಳನ್ನು ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಈರೋಡ್‌ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಈರೋಡ್‌ ಪೊಲೀಸರು ನಾಡಾರ್ ಸಮುದಾಯದ ಸೂರಿಯಾ ಎಂಬ ವ್ಯಕ್ತಿಯನ್ನು ಈರೋಡ್ ಪೊಲೀಸರು ಬಂಧಿಸಿದ್ದಾರೆ.

ಈರೋಡ್‌ನ ಕೊಡುಮುಡಿಯ ಪ್ರದೇಶದ ಸೂರಿಯಾ ಎಂಬ ಯುವಕ ತಮ್ಮ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದನೆಂದು ರಾಮಸ್ವಾಮಿ ದಂಪತಿಗಳು ಪ್ರಶ್ನಿಸಿದ್ದರು. ಮೇಲ್ಜಾತಿಯವರನ್ನು ಪ್ರಶ್ನಿಸಿದ ದಲಿತ ಕುಟುಂಬದ ವಿರುದ್ಧ ಕೋಪಗೊಂಡ ಮೇಲ್ಜಾತಿಯ ಯುವಕರು ರಾಮಸ್ವಾಮಿ ಕುಟುಂಬದ ಮೇಲೆ ಹಲ್ಲೆನಡೆಸಿದ್ದು, ರಾಮಸ್ವಾಮಿ ಮತ್ತು ಅರುಕ್ಕಾಣಿತಯವರನ್ನು ಆರೋಪಿ ಸೂರಿಯಾ ಕೊಲೆ ಮಾಡಿದ್ದಾನೆ.

ಘಟನೆಯು ಶುಕ್ರವಾರ ನಡೆದಿದ್ದು, ರಾಮಸ್ವಾಮಿಯವರ ಮಗಳು, ಸೊಸೆ ಮತ್ತು ಮೊಮ್ಮಕ್ಕಳು ದಾರಿಯಲ್ಲಿ ಹೋಗುತ್ತಿದ್ದಾಗ ಸೂರಿಯಾ ಮತ್ತವನ ಸ್ನೇಹಿತರು ಅವರ ಬಗ್ಗೆ ಲೈಂಗಿಕ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರಿಂದ ಆ ದಲಿತ ಮಹಿಳೆಯರಿಗೆ ಕಸಿವಿಸಿಯಾಗಿದ್ದು, ಮನೆಯಲ್ಲಿ ರಾಮಸ್ವಾಮಿ ಅವರಿಗೆ ವಿಷಯವನ್ನು ತಿಳಿಸಿದ್ದಾರೆ. ತಮ್ಮ ಮಕ್ಕಳನ್ನು ನಿಂದಿಸಿದ್ದನ್ನು ರಾಮಸ್ವಾಮಿ ಮತ್ತು ಅವರ ಕುಟುಂಬ ಯುವಕರನ್ನು ಪ್ರಶ್ನಸಿದ್ದು, ಜಗಳ ತಾರಕ್ಕೇರಿ ಹೊಡೆದಾಡಿಕೊಂಡಿದ್ದಾರೆ.

ನಂತರ ಸೂರಿಯ ತನ್ನ ಮನೆಗೆ ಹಿಂತಿರುಗಿ ತನ್ನ ತಂದೆಗೆ ವಿಷಯ ತಿಳಿಸಿದ್ದಾನೆ. ದಲಿತ ಕುಟುಂಬದಿಂದ ಥಳಿತಕ್ಕೊಳಗಾಗಿದ್ದಕ್ಕೆ ನಾಚಿಕೆಯಾಗಬೇಕು. ಅವರ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎಂದು ಆತನ ತಂದೆ ಪ್ರಚೋದಿಸಿದ್ದಾರೆ. ತಂದೆಯ ಮಾತಿನಿಂದ ಉದ್ರಕ್ತಗೊಂಡ ಸೂರಿಯ,  ತನ್ನ ಕೆಲವು ಸ್ನೇಹಿತರೊಂದಿಗೆ ತೀಕ್ಷ್ನವಾದ ಆಯುಧಗಳನ್ನು ತೆಗೆದುಕೊಂಡು ದಲಿತ ರಾಮಸ್ವಾಮಿಯ ಮನೆಗೆ ಹೋಗಿ ದಂಪತಿಗಳ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ” ಎಂದು ಈರೋಡ್ ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಸೂರಿಯನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಆತನ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗಿದೆ. ಇತರರನ್ನು ಹುಡುಕುತ್ತಿದ್ದೇವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: ವೇತನ ವಿವಾದ: ದಲಿತ ಯುವಕನನ್ನು ಜೀವಂತ ಸುಟ್ಟು ಕೊಂದ ಮಾಲೀಕ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights