ನಗರದ ಮಳೆಗೆ ಜನರ ಜೀವನ ತತ್ತರ : ಅನ್ನದ ಕುಕ್ಕರ್ ನಲ್ಲಿ ಮೋರಿ ನೀರು : ಕಂಗಾಲಾದ ಜನ!
ಬೆಂಗಳೂರಿನ ಆರ್ ಆರ್ ನಗರದ ಕೆಂಚೇನಹಳ್ಳಿಯಲ್ಲಿ ಮಳೆ ನೀರಿನಿಂದಾಗಿ ಜನ ಪರದಾಡುವಂತಾಗಿದೆ. ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿ ಜನ ಕಂಗಾಲಾಗಿ ಹೋಗಿದ್ದಾರೆ.
ನಿನ್ನೆ ರಾಜ್ಯ ರಾಜಧಾನಿಯಲ್ಲಿ ವರುಣನ ಅರ್ಭಟಕ್ಕೆ ಜನ ಹೈರಾಣಾಗಿದ್ಧಾರೆ. ಅಧಿಕ ಮಳೆಯಿಂದಾಗಿ ಏಕಾಏಕಿ ಮನೆಯೊಳಗೆ ರಾಜಕಾಲುವೆ ನೀರು ನುಗ್ಗಿದ್ದು ಅನ್ನದ ಕುಕ್ಕರ್ ಗೆ ನೀರು ಸೇರಿಕೊಂಡು ಊಟಕ್ಕೆ ಕುಳಿತವರು ಕಣ್ಣೀರಾಕಿದ್ದಾರೆ. ರಾತ್ರಿ 10 ಗಂಟೆಗೆ ಮನೆಗೆ ನೀರು ನುಗ್ಗಿ ಜನ ಜೀವನವೇ ಅಸ್ತವ್ಯಸ್ತವಾಗಿದೆ.
ಚಿಕ್ಕವರಿಂದ ವಯಸ್ಸಾದವರವರೆಗೆ ರಕ್ಕಸ ಮಳೆಯ ಹೊಡೆತಕ್ಕೆ ರಾತ್ರಿ ಇಡೀ ನಿದ್ದೆ ಇಲ್ಲದೆ ಕುಳಿತಿದ್ದಾರೆ. ರಾತ್ರಿ ಊಟ ಮಾಡದೆ ಮಲಗಿದ್ದಾರೆ. ಜನ ಜಾನುವಾರುಗಳ ಪ್ರಾಣ ಉಳಿಸಿಕೊಳ್ಳಲು ಹರಸಾಹಸವೇ ಪಟ್ಟಿದ್ದಾರೆ. ಆದರೂ ಕೆಲವೆಡೆ ಜಾನುವಾರುಗಳು ಸಾವನ್ನಪ್ಪಿರುವ ವರದಿಗಳಾಗಿವೆ.
ಮನೆಯಲ್ಲಿ ಚರಂಡಿ ನೀರು, ಕೆಸರು, ವಾಸನೆಯಲ್ಲಿ ಜನ ದಿನ ಕಳೆದಿದ್ದಾರೆ. ರಾತ್ರಿಯಿಡಿ ತಾವು ಅನುಭವಿಸಿದ ಸಮಸ್ಯೆಯನ್ನು ಸುದ್ದಿರಾರರ ಬಳಿ ತೋಡಿಕೊಂಡಿದ್ದಾರೆ. ಕೂಡಲೇ ತಮ್ಮ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಕೆಂಚೇನಹಳ್ಳಿ ಸ್ಥಳೀಯರು ಮನವಿ ಮಾಡಿದ್ದಾರೆ.
ಇನ್ನೂ ಭಾರೀ ಮಳೆಗೆ ರಸ್ತೆಗಳು ನದಿಗಳಂತಾಗಿ ವಾಹಸ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಅಡಿಗಿಂತಲೂ ನನೀರು ರಸ್ತೆಯ ಮೇಲೆ ನಿಂತಿದ್ದರಿಂದ ವಾಹನ ಸಂಚಾರ ಕಷ್ಟವಾಗಿ ಜನ ವಾಹನಗಳನ್ನು ಅಲ್ಲಲ್ಲೇ ನಿಲ್ಲಿಸಿ ತೆರಳಿದ್ದು ಹಲವೆಡೆ ಕಂಡು ಬಂದಿದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ವಾಹನಗಳು ನೀರಿನಲ್ಲಿ ಮುಳುಗಿವೆ.