ಸರ್ಜಾ ಮನೆಯಲ್ಲಿ ಸಂತಸ ತಂದ ಚಿರು ಮೇಘನಾ ಪುತ್ರ ಎಂತಾ ಯೋಗದಲ್ಲಿ ಹುಟ್ಟಿದ್ದಾನೆ ಗೊತ್ತಾ…?

ಸರ್ಜಾ ಕುಟುಂಬಕ್ಕೆ ಅಕ್ಟೋಬರ್ ತಿಂಗಳು ಸಖತ್ ಸ್ಪೆಷಲ್. ಅಪ್ಪ-ಅಮ್ಮನ ಎಂಗೇಜ್ಮೆಂಟ್ ದಿನವೇ ಹುಟ್ಟಿದ್ದಾನೆ ಜ್ಯೂನಿಯರ್ ಚಿರು. ಚಿರಂಜೀವಿ ಪತ್ನಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ನ ನೀಡಿದ್ದಾರೆ. ಈ ಶುಭ ಸುದ್ದಿ ಕೇಳಿದ ಕುಟುಂಬಸ್ಥರು ಹಾಗೂ ಅಭಿಮಾಣಿಗಳು ಸಖತ್ ಖುಷಿ ಆಗಿದ್ದಾರೆ. ಅದ್ಯಾವ ಮಟ್ಟಿಗೆ ಅಂದರೆ ಮೇಘನಾ ರಾಜ್ ದಾಖಲಾಗಿದ್ದ ಆಸ್ಪತ್ರೆ ಮುಂದೆ ಪಟಾಕಿ ಸಿಡಿಸಿ, ಸಿಹಿ ಹಂಚಿದ್ದಾರೆ.

ಚಿರು ಮೇಘನಾ ಮನಗ ಅದೃಷ್ಟ ಎಂತದ್ದು ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಗುರುವಾರ ಬೆಳಿಗ್ಗೆ 11.7ಕ್ಕೆ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದ ಗಳಿಗೆ ಅಂತಿಥಾ ಶುಭ ಮೂಹರ್ತವಲ್ಲ. ನವರಾತ್ರಿ ಶುಭದಿನ. ಗುರು ರಾಘವೇಂದ್ರ ಪ್ರಭುಗಳ ವಾರ. ಗದಕೇಸರಿ ಯೋಗದಲ್ಲಿ ಚಿರು ಪುತ್ರ ಹುಟ್ಟಿದ್ದಾನೆ. ಈ ಯೋಗದಲ್ಲಿ ಹುಟ್ಟಿದ್ರೆ ಕನಿಷ್ಠ 1200 ಹುಣ್ಣಿಮೆಗಳನ್ನು ಕಾಣುತ್ತಾರೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.

ಅಂದರೆ ಚಿರು ಪುತ್ರ ಶತಾಯುಷಿಯಾಗುತ್ತಾನೆ. ನೂರು ವರ್ಷಗಳ ಕಾಲ ಗಟ್ಟಿಮುಟ್ಟಾಗಿ ಭೀಮ ಬಲದಿಂದ ಬದುಕಿರುತ್ತಾನೆ. ಚಿರು ಪುತ್ರನ ಅದೃಷ್ಟ ಹೇಗಿದೆ ಅಂದರೆ ಈ ಹುಡುಗ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ. ಯಾವುದೇ ವ್ಯಾಪಾರ ಆರಮಭಿಸಿದರೂ ಸೋಲು ಅನ್ನೋ ಮಾತೇ ಬರೋದಿಲ್ಲ. ಪಕ್ಕಾ ರ್ಯಾಂಕ್ ಸ್ಟೋಡೆಂಟ್ ಆಗುತ್ತಾನೆ. ರಾಜ್ಯಕ್ಕಷ್ಟೇ ಅಲ್ಲ ದೇಶಕ್ಕೂ ಹೆಸರು ಕೀರ್ತಿ ತರಬಲ್ಲ ಚಿರು ಮೇಘನಾ ಮಗ.

ಈ ಎಲ್ಲವೂ ಜಗ ಕೇಸರಿ ಯೋಗದಲ್ಲಿ ಹುಟ್ಟಿದವರ ಅದೃಷ್ಟದ ಸಂಕೇತಗಳಾಗಿವೆ. ಇನ್ನೂ ಮಗುವಿನ ಜಾತಕ ಬರೆಸಿರೋ ಅರ್ಜುನ್ ಸರ್ಜಾ ನಿಜಕ್ಕೂ ಖುಷಿಯಾಗಿದ್ದಾರೆ. ಯಾಕಂದ್ರೆ ಚಿರು ಮೇಘನಾ ಪುತ್ರನಿಗೆ ಒಂದೆರೆಡು ಸಣ್ಣ ಪುಟ್ಟ ಗಂಡಾಂತರಗಳಿವೆ. ಐದನೇ ವಯಸ್ಸಿನಿಂದ 11 ವಯಸ್ಸಿನ ಮದ್ಯೆ ತುಂಬಾ ಎಚ್ಚರಿಕೆಯಿಂದ ನೋಡಿಕೊಳ್ಳಬೇಕಿದೆ. ಈ ಸಂದರ್ಭದಲ್ಲಿ ಮಗುವಿಗೆ ಜಲಗಂಡಾಂತರವಿದೆ ಎಂದು ಜಾತಕದಲ್ಲಿದೆ ಎನ್ನಲಾಗುತ್ತಿದೆ. ಇನ್ನೂ ಸರ್ಜಾ ಕುಟುಂಬದ ಅಷ್ಟದೈವ ಹನುಮನ ಆಶೀರ್ವಾದವನ್ನು ಮಗು ಹೋದಿದೆ. ಬಲಿಷ್ಟ ದೇಹವನ್ನು ಮಗುಹೊಂದಿರುತ್ತದೆ. ಮಗುವಿನ ಭವಿಷ್ಯ ಉಜ್ವಲವಾಗಿರುತ್ತದೆ. ಮೇಘನಾ ಚಿರು ಮಗುವಿಗೆ ನೀವು ಹರಿಸಿ ಆಶೀರ್ವದಿಸಿ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights