ವಾಹನ ಸವಾರರ ಮೇಲೆ ಹಲ್ಲೆ : ರಮೇಶ್ ಬೆಂಬಲಿಗರಿಂದ ಗೂಂಡಾ ವರ್ತನೆ!

ಬೆಳಗಾವಿಯಲ್ಲಿ ಇಂದು ಮತ್ತೆ ಪ್ರತಿಭಟನೆಗೆ ಮುಂದಾದ ರಮೇಶ್ ಜಾರಕಿಹೊಳಿ ಬೆಂಬಲಿಗರು ಗೂಂಡಾಗಿರಿ ತೋರಿಸುತ್ತಿದ್ದಾರೆ.

ಇಂದು ಬೆಳಿಗ್ಗೆಯಿಂದ ಪೆಟ್ರೋಲ್ ಬಂಕ್, ಬಸ್, ಮಾರ್ಕೇಟ್ ಬಂದ್ ಮಾಡುವಲ್ಲಿ ನಿರತರಾದ ಕೆಲ ರಮೇಶ್ ಬೆಂಬಲಿಗರು ಗೂಂಡಾ ವರ್ತನೆ ತೋರುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮಮದಾಪುರ ಕ್ರಾಸ್ ಬಳಿ ರಮೇಶ್ ಬೆಂಬಲಿಗರಿಂದ ಗೂಂಡಾಗಿರಿ ವರ್ತನೆ ಕಂಡುಬಂದಿದೆ. ರಸ್ತೆ ತಡೆ ತೆಪದಲ್ಲಿ ವಾಹನ ಸವಾರರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.

ರಮೇಶ್ ಸೆಕ್ಸ್ ಸಿಡಿ ಬಹಿರಂಗದ ಬಳಿಕೆ ಗೋಕಾಕ್ ತಾಲೂಕಿನಲ್ಲಿ ರಮೇಶ್ ಬೆಂಬಲಿಗರಿಂದ ಆಕ್ರೋಶ ಹೆಚ್ಚಾಗಿದೆ. ಸಿಡಿ ಬಿಡುಗಡೆಯಾದ ದಿನದಿಂದಲೂ ರಸ್ತೆಗಿಳಿದು ಬಲವಂತವಾಗಿ ಬಂದ್ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಬಸ್ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ್ ಹೊರಹಾಕಿದ ಬೆಂಬಲಿಗರು ಇಂದು ವಾಹನ ಸವಾರರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

ಪೆಟ್ರೋಲ್ ಬಂಕ್, ಅಂಗಡಿಗಳನ್ನು ಬಲವಂತವಾಗಿ ಬಂದ್ ಮಾಡುತ್ತಿದ್ದಾರೆ. ಈ ರೀತಿ ವರ್ತನೆಯನ್ನು ನೋಡಿಕೊಂಡು ಪೊಲೀಸರು ಸುಮ್ಮನಿದ್ದಾರಾ ಎನ್ನುವ ಪ್ರಶ್ನೆ ಮೂಡುತ್ತದೆ. ಯಾಕೆ ಗೂಂಡಾಗಳ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ. ಅದೇ ರೈತರು ಪ್ರತಿಭಟನೆಗೆ ಮುಂದಾದರೆ ಮೂರು ದಿನ ಮುಂಚಿತವಾಗಿ ಒಪ್ಪಿಗೆ ಪತ್ರ ಪಡೆಯಬೇಕು. ಆದರೆ ರಮೇಶ್ ಬೆಂಬಲಿಗರು ಯಾರಿಂದ ಮನವಿ ಪಡೆದು ಬಲವಂತವಾಗಿ ಅಂಗಡಿಗಳನ್ನು ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ? ಇಷ್ಟೆಲ್ಲಾ ಗುಂಡಾ ವರ್ತನೆ ತೋರಿದರೂ ಪೋಲೀಸರು ಮಾತ್ರ ಯಾಕೆ ಕೈಕಟ್ಟಿ ಕುಳಿತಿದ್ದಾರೆ. ಇವರ ವಿರುದ್ಧ ಕ್ರಮಕ್ಕೆ ಯಾಕೆ ಮುಂದಾಗುತ್ತಿಲ್ಲ? ಇಂತೆಲ್ಲಾ ಪ್ರಶ್ನೆಗಳು ಕೇವಲ ಪ್ರಶ್ನೆಗಳಾಗೇ ಉಳುತ್ತಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights